ಚಿದಾನಂದ ಎಂ.ಕೆ. ಬೀರಮಂಗಲ ನಿಧನ

0

ಸುಳ್ಯದ ಬೀರಮಂಗಲ ನಿವಾಸಿ, ಮೂಲತಃ ಬಂಟ್ವಾಳದ ಮಣಿ ಕುಟುಂಬದವರಾದ ಚಿದಾನಂದರ ಎಂ.ಕೆ.ರವರು ಹೃದಯಾಘಾತದಿಂದ ನಿನ್ನೆ ರಾತ್ರಿ (ಜೂನ್ 29ರಂದು) ನಿಧನರಾದರು. ಅವರಿಗೆ ಅಂದಾಜು 70 ವರ್ಷ ವಯಸ್ಸಾಗಿತ್ತು. ನಿನ್ನೆ ರಾತ್ರಿ ತೀವ್ರ ಅಸೌಖ್ಯಕೊಳಗಾದ ಅವರನ್ನು ಕೂಡಲೇ ಅಂಬುಲೆನ್ಸ್ ನಲ್ಲಿ ಕೆವಿಜಿ ಆಸ್ಪತ್ರೆಗೆ ಕರೆತರಲಾಯಿತು. ಅಲ್ಲಿ ಅವರು ಮೃತಪಟ್ಟರೆಂದು ತಿಳಿದು ಬಂದಿದೆ.

ಮೃತರು ಪತ್ನಿ ಲತಾ, ಓರ್ವ ಪುತ್ರ ಚಿಂತನ್ , ಸೊಸೆ ಸ್ಪೂರ್ತಿ, ಸಹೋದರರಾದ ಎಂ.ಕೆ. ರವಿಕುಮಾರ್, ಜಯರಾಮ, ಇಬ್ಬರು ಸಹೋದರಿಯರು, ಹಾಗೂ ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.