ಆಲೆಟ್ಟಿ : ಗೃಹಜೋತಿ ಯೋಜನೆಯ ಅರ್ಜಿ ಸಲ್ಲಿಕೆಗೆ ವ್ಯವಸ್ಥೆ ಕಲ್ಪಿಸಿದ ಕಾಂಗ್ರೆಸ್ ಮುಖಂಡರು

0

ಕರ್ನಾಟಕ ರಾಜ್ಯ ಸರ್ಕಾರದ ಗೃಹ ಜ್ಯೋತಿ ಯೋಜನೆಗೆ ಅಲೆಟ್ಟಿ ಗ್ರಾಮ ಪಂಚಾಯತ್ ನ 6 ಮತ್ತು 7 ನೇ ವಾರ್ಡಿನಲ್ಲಿ ಪಲಾನುಭವಿಗಳಿಗೆ ಅರ್ಜಿ ಸಲ್ಲಿಸಲು ಸ್ಥಳೀಯ ಕಾಂಗ್ರೆಸ್ ಮುಖಂಡರು ವ್ಯವಸ್ಥೆಯನ್ನು ಕಲ್ಪಿಸಿ ಸಹಕರಿಸಿದ್ದಾರೆ. ಗ್ರಾಮೀಣ ಭಾಗದ ಜನತೆಗೆ ಅರ್ಜಿ ಸಲ್ಲಿಸಲು ಸುಲಭವಾಗಲು ಈ ಕಾರ್ಯ ಮಾಡಲಾಗಿದೆ ಎಂದು ಆಯೋಜನೆ ಮಾಡಿರುವ ಮುಖಂಡರು ಸುದ್ದಿಗೆ ತಿಳಿಸಿದ್ದಾರೆ.

ಕಾರ್ಯಕ್ರಮಕ್ಕೆ ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷರಾದ ಎಸ್ ಸಂಸುದ್ಧಿನ್, ಮಾಜಿ ಗ್ರಾ. ಪ. ಸದಸ್ಯ ಯೂಸುಫ್ ಅಂಜಿಕ್ಕಾರು, ರಾಧಾಕೃಷ್ಣ ಪಾರಿವಾರಕನ, ಹಿರಿಯ ಕಾಂಗ್ರೆಸ್ ನಾಯಕರಾದ ಬಾಪೂಸಾಹೇಬ್ ಆರಂಬೂರು, ಭಾಷಾ ಸಾಹೇಬ್ ಇವರುಗಳು ಸಹಕಾರ ನೀಡಿದ್ದು ಸ್ಥಳೀಯ ನೂರಾರು ಮಂದಿ ಫಲಾನುಭವಿಗಳು ಇದರ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ.