ಕಳಂಜ: ಕಜೆಮೂಲೆ – ತಂಟೆಪ್ಪಾಡಿ – ಕಿಲಂಗೋಡಿ ರಸ್ತೆ ಕಾಂಕ್ರೀಟೀಕರಣ

0

ರಸ್ತೆ ಬಂದಾಗುವ ಭೀತಿ ದೂರ – ಜಲ್ಲಿ ಹಾಕಿ ಸಂಚಾರ ಸುಗಮ

ಮಾಧ್ಯಮ ವರದಿಗೆ ಸ್ಪಂದನೆ

ಕಳಂಜ ಗ್ರಾಮದ ಕಜೆಮೂಲೆ – ತಂಟೆಪ್ಪಾಡಿ – ಕಿಲಂಗೋಡಿ ರಸ್ತೆ ಕಾಂಕ್ರೀಟೀಕರಣ ಕಾಮಗಾರಿ ಅಪೂರ್ಣವಾಗಿದ್ದು ರಸ್ತೆ ಬಂದಾಗುವ ಭೀತಿ ಉಂಟಾದ ಹಿನ್ನೆಲೆಯಲ್ಲಿ ಮಾದ್ಯಮ ವರದಿ ಮಾಡಲಾಗಿದ್ದು, ಜು.4 ರಂದು ರಸ್ತೆಗೆ ಜಲ್ಲಿ ಹಾಕಿ ರಸ್ತೆ ಸಂಚಾರ ಸುಗಮವಾಗುವಂತೆ ಮಾಡಿ ಜನರ ಸಮಸ್ಯೆಗೆ ಸ್ಪಂದಿಸಿರುವ ಘಟನೆ ವರದಿಯಾಗಿದೆ.

ರಸ್ತೆಯನ್ನು ಕಾಂಕ್ರೀಟೀಕರಣ ಮಾಡುವ ಸಲುವಾಗಿ ಸುಮಾರು ಒಂದು ಕಿ‌. ಮೀ ನಷ್ಟು ರಸ್ತೆಯನ್ನುಮಣ್ಣು ತೆಗೆಯಲಾಗಿತ್ತು. ಬಳಿಕ ಅದರ ಅರ್ಧದಷ್ಟು ಭಾಗದ ರಸ್ತೆಯನ್ನು ಕಾಂಕ್ರೀಟ್ ಮಾಡಲಾಗಿದ್ದು ಉಳಿದ ಭಾಗ ಹಾಗೇ ಬಿಟ್ಟು ಹೋಗಲಾಗಿತ್ತು. ಮಳೆಗಾಲ ಆರಂಭವಾಗಿದ್ದು ಕಾಂಕ್ರೀಟ್ ಮಾಡಲು ಬಾಕಿ ಇದ್ದ ರಸ್ತೆ ಸಂಪೂರ್ಣ ಹದ ಗೆಟ್ಟಿದ್ದು ರಸ್ತೆ ಸಂಚಾರ ಸ್ಥಗಿತವಾಗುವ ಸಂಭವ ಇರುವುದಾಗಿ ಸುದ್ದಿ ಮಾಧ್ಯಮ ಜು.3 ರಂದು ವರದಿಮಾಡಿತ್ತು. ಸದ್ಯಕ್ಕೆ ಈ ರಸ್ತೆಗೆ ಕಂಟ್ರಾಕ್ಟರ್ ಜಲ್ಲಿ ಹಾಕಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ ಎಂಬುದು ಅಭಿನಂದನಾರ್ಹ ಕೆಲಸವಾಗಿದೆ.