ಸೆ. 26ರಂದು ಮೆಸ್ಕಾಂ ಎಂ.ಡಿ ಮುರ್ಕೆತ್ತಿ ವಾರ್ಡ್ ಗೆ ಭೇಟಿ : ಶಾಂತಿಮೂಲೆ ಟಿ.ಸಿ ಗೆ ಚಾಲನೆ

0

ಪೆರುವಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುರ್ಕೆತ್ತಿ ವಾರ್ಡ್ ಶಾಂತಿಮೂಲೆ ಮತ್ತು ಕೊಲ್ಯ ಸಮೀಪ ವಿದ್ಯುತ್ ಟ್ರಾನ್ಸ್ ಫಾರ್ಮ್ ರ್ ಕಾರ್ಯಾರಂಭಕ್ಕೆ ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಪದ್ಮಾವತಿ ಅವರು ಸೆ. 26 ರಂದು ಬೆಳಿಗ್ಗೆ ಮುರ್ಕೆತ್ತಿಗೆ ಭೇಟಿ ನೀಡಲಿದ್ದಾರೆ ಎಂದು ಪೆರುವಾಜೆ ಗ್ರಾಮ ಪಂಚಾಯಿತಿ ಸದಸ್ಯರಾದ ಸಚಿನ್ ರಾಜ್ ಶೆಟ್ಟಿ ತಿಳಿಸಿದ್ದಾರೆ.
ಶಾಂತಿಮೂಲೆ ಭಾಗದ ಜನತೆಯ ಬಹು ದಿನಗಳ ಕನಸು ನನಸಾಗಲು ಎಂ. ಡಿ ಅವರು ಕಾರಣೀಕರ್ತರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.