ಪಂಜ: ವಿಪತ್ತು ನಿರ್ವಹಣಾ ತಂಡದಿಂದ ಕಿಂಡಿ ಅಣೆಕಟ್ಟು ಸ್ವಚ್ಛತಾ ಕಾರ್ಯಕ್ರಮ

0

ಶೌರ್ಯ ವಿಪತ್ತು ನಿರ್ವಹಣಾ ಘಟಕ ಪಂಜ ವಲಯ ಮತ್ತು ಶೌರ್ಯ ವಿಪತ್ತು ನಿರ್ವಹಣಾ ಘಟಕ ನಿಂತಿಕಲ್ಲು ವಲಯ ಇದರ ಸದಸ್ಯರಿಂದ
ಪಂಜದ ಬೊಳ್ಮಲೆ ಎಂಬಲ್ಲಿ ಕಿಂಡಿ ಅಣೆ ಕಟ್ಟು ಸ್ವಚ್ಛತಾ ಕಾರ್ಯಕ್ರಮ ಜು.7 ರಂದು ನಡೆಯಿತು.


ಜು.6 ಮಳೆಗೆ ಹೊಳೆ ನೀರಿನಲ್ಲಿ ಭಾರಿ ಗಾತ್ರದ ಮರಗಳು ತೇಲಿ ಬಂದು ಕಿಂಡಿ ಅಣೆಕಟ್ಟಲ್ಲಿ ಸಿಲುಕಿತ್ತು. ಇವುಗಳನ್ನು ವಿಪತ್ತು ನಿರ್ವಹಣಾ ಘಟಕದ ಸದಸ್ಯರು ತೆರವು ಗೊಳಿಸಿ ಸೇವೆ ಸಲ್ಲಿಸಿದ್ದಾರೆ.