ಪುತ್ತೂರು ನಗರ ಪೊಲೀಸ್ ಠಾಣೆಯಎ.ಎಸ್.ಐ ಕೆ. ಲೋಕನಾಥ್ ಕುದ್ವ ನಿವೃತ್ತಿ

0

ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ ಎ.ಎಸ್.ಐ ಕೆ.ಲೋಕನಾಥ್ ಕುದ್ವ ರವರು ಮೇ 31ರಂದು ಸೇವಾ ನಿವೃತ್ತಿ ಹೊಂದಿದ್ದಾರೆ.
1992ರಲ್ಲಿ ಪೊಲೀಸ್ ಇಲಾಖೆಗೆ ನೇಮಕಗೊಂಡು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೇಬಲ್ ಆಗಿ ಕರ್ತವ್ಯಕ್ಕೆ ಹಾಜರಾಗಿದ್ದ ಅವರು ಬಳಿಕ ಮುಲ್ಕಿ, ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ 2008ರಲ್ಲಿ ಹೆಡ್‌ಕಾನ್‌ಸ್ಟೇಬಲ್ ಅಗಿ ಪದೋನ್ನತಿ ಹೊಂದಿ ವೇಣೂರು ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದರು.ಮುಂದೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡು 2016ರಲ್ಲಿ ಎ.ಎಸ್.ಐ ಆಗಿ ಪದೋನ್ನತಿ ಹೊಂದಿ ಪುತ್ತೂರು ನಗರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದರು. ಅವರು ಮೂಲತಃ ಪಂಜ ಹೋಬಳಿಯ ಕೂತ್ಕುಂಜ ಗ್ರಾಮದ ಕುದ್ವ ನಿವಾಸಿಯಾಗಿದ್ದು, ಪ್ರಸ್ತುತ ಪುತ್ತೂರು ತಾಲ್ಲೂಕು, ಕೆಮ್ಮಿಂಜೆ ಗ್ರಾಮದ, ಮರೀಲ್-ಕಾಡಮನೆ ಎಂಬಲ್ಲಿ ಪತ್ನಿ ಶ್ರೀಮತಿ ಜಯ ಲೋಕನಾಥ್, ಪುತ್ರ ಅಖಿಲೇಶ್ ಕೆ.ಎಲ್, ಪುತ್ರಿ ಅಕ್ಷಯ ಕೆ.ಎಲ್ ಅವರೊಂದಿಗೆ ನೆಲೆಸಿದ್ದಾರೆ.