ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ವತಿಯಿಂದ ಬೆಳ್ಳಾರೆಯ ಹಿರಿಯ ಪತ್ರಿಕಾ ವಿತರಕ ಉಮೇಶ್ ಹೆಗ್ಡೆಯವರಿಗೆ ಸನ್ಮಾನ

0


ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ಘಟಕದ ವತಿಯಿಂದ ಪತ್ರಿಕಾ ದಿನಾಚರಣೆಯ ಪ್ರಯುಕ್ತ ಬೆಳ್ಳಾರೆಯ ಹಿರಿಯ ಪತ್ರಿಕಾ ವಿತರಕರಾದ ಉಮೇಶ್ ಹೆಗ್ಡೆ ಯವರನ್ನು ಅವರ ಮನೆಯಲ್ಲಿ ಸನ್ಮಾನಿಸಲಾಯಿತು.
ಕೆಜೆಯು ಜಿಲ್ಲಾಧ್ಯಕ್ಷ ಹರೀಶ್ ಬಂಟ್ವಾಳ್ ಉಮೇಶ್ ಹೆಗ್ಡೆ- ಶ್ರೀಮತಿ ಸುಧಾ ದಂಪತಿಯನ್ನು ಸನ್ಮಾನಿಸಿ,ಅಭಿನಂದನಾ ಮಾತುಗಳನ್ನಾಡಿದರು.

ಕೆಜೆಯು ಸುಳ್ಯ ಘಟಕದ ಅಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ ಸ್ವಾಗತಿಸಿ,ಪ್ರಾಸ್ತಾವಿಕವಾಗಿ ಮಾತನಾಡಿದರು.ಪ್ರಧಾನ ಕಾರ್ಯದರ್ಶಿ ರಮೇಶ್ ನೀರಬಿದಿರೆ ಸನ್ಮಾನ ಪತ್ರ ವಾಚಿಸಿದರು. ಜಿಲ್ಲಾ ಜತೆ ಕಾರ್ಯದರ್ಶಿ ಈಶ್ವರ್ ವಾರಣಾಶಿ ವಂದಿಸಿದರು.


ಕೋಶಾಧಿಕಾರಿ ಜಯಶ್ರೀ ಕೊಯಿಂಗೋಡಿ, ಉಪಾಧ್ಯಕ್ಷರಾದ ಗಣೇಶ್ ಕುಕ್ಕುದಡಿ, ಪೂಜಾಶ್ರೀ ವಿತೇಶ್ ಕೋಡಿ, ಶ್ರೀಮತಿ ಭಾರತಿ ಬಂಟ್ವಾಳ್ ಉಪಸ್ಥಿತರಿದ್ದರು.