ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಿಂದ ಪಡೆದ ಸಾಲವನ್ನು ಮರುಪಾವತಿ ಮಾಡಲು ಸೂಚನೆ

0

ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಿಂದ ಸಾಲ ಪಡೆದವರು ಕೂಡಲೇ ಮರುಪಾವತಿ ಪ್ರಕ್ರಿಯೆ ಆರಂಭಿಸಬೇಕೆಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.


ರಾಜ್ಯದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರ ಅಧ್ಯಕ್ಷತೆಯಲ್ಲಿ ಜು.13 ರಂದು ನಡೆದ ನಿಗಮದ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಸಾಲ ವಸೂಲಾತಿಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ನಿರ್ಧರಿಸಲಾಯಿತು.


ಜಿಲ್ಲೆಯಲ್ಲಿ ಸಾಲ ಮರುಪಾವತಿ ಅಭಿಯಾನ ಪ್ರಾರಂಭಿಸಲಾಗಿದ್ದು ಸಾಲ ಮರುಪಾವತಿ ಮಾಡಲು ಬಾಕಿ ಇರುವ ಫಲಾನುಭವಿಗಳು ಈ ಕೆಳಕಾಣಿಸಿದ ದಿನಾಂಕದಂದು ಈ ಕೆಳಕಂಡ ಕಛೇರಿಯನ್ನು ಸಂಪರ್ಕಿಸಲು ಕೊರಲಾಗಿದೆ.
ಪ್ರತೀ ತಿಂಗಳ ೧೫ನೇ ತಾರೀಕು ಕಡಬ ತಾಲೂಕು ಆಡಳಿತ ಕಛೇರಿ.

ಪ್ರತೀ ತಿಂಗಳ ೧೭ನೇ ತಾರೀಕು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ತಾಲೂಕು ಮಾಹಿತಿ ಕೇಂದ್ರ ತಾಲೂಕು ಪಂಚಾಯತ್ ಕಟ್ಟಡ ಜೆ.ಸಿ. ರೋಡ್ ಸುಳ್ಯ ಇವರನ್ನು ಸಂಪರ್ಕಿಸಲು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಿಬ್ಬಂದಿ ಕಮಾಲ್ ( 8152012123) ರವರನ್ನು ಅಥವಾ ಜಿಲ್ಲಾ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮರುಪಾವತಿ ಅಧಿಕಾರಿ ಪಕೀರಪ್ಪ (9845964651 )ರನ್ನು ಸಂಪರ್ಕಿಸಬಹುದಾಗಿದೆ.