ಬೆಳ್ಳಾರೆ: ವೀರನಾಥ್ ರಿಗೆ ಜೇಸಿ ಪಂಚರತ್ನ‌ ಪುರಸ್ಕಾರ

0

ಬೆಳ್ಳಾರೆ ಹೋಂ ಗಾರ್ಡ್ ಸಿಬ್ಬಂದಿಯಾಗಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ವೀರನಾಥ ಎಂ. ರವರಿಗೆ ಪಂಚರತ್ನ ಪುರಸ್ಕಾರಗಳಲ್ಲೊಂದಾದ ಉದ್ಯೋಗ ರತ್ನ ಪುರಸ್ಕಾರ ಲಭಿಸಿದೆ.


ಇವರು ತಮ್ಮ ಐಟಿಐ ಶಿಕ್ಷಣದ ಬಳಿಕ ವಾಲಿಬಾಲ್ ಮತ್ತು ಕಬಡ್ಡಿ ತರಬೇತುದಾರರಾಗಿ ಹಲವು ಶಾಲೆಗಳಲ್ಲಿ ತರಬೇತಿ ನೀಡುತ್ತಿದ್ದಾರಲ್ಲದೆ ಕರ್ನಾಟಕ ರಾಜ್ಯ ತೀರ್ಪುಗಾರರ ಮಂಡಳಿಯ ಸದಸ್ಯರಾಗಿದ್ದಾರೆ. ಪ್ರಸ್ತುತ ಕೆ.ಎಫ್.ಡಿ.ಸಿ. ಉದ್ಯೋಗಿಯಾಗಿರುವ ಇವರು ಜೇಸಿಐ ಬೆಳ್ಳಾರೆಯ ಪೂರ್ವಾಧ್ಯಕ್ಷ.