ಲಯನ್ಸ್ ಕ್ಲಬ್‌ ಬೆಳ್ಳಾರೆ ಜಲದುರ್ಗ ವತಿಯಿಂದ ಕಾರ್ಗಿಲ್ ವಿಜಯೋತ್ಸವ ದಿನಾಚರಣೆ

0

ಲಯನ್ಸ್ ಕ್ಲಬ್‌ ಬೆಳ್ಳಾರೆ ಜಲದುರ್ಗ ವತಿಯಿಂದ ಕಾರ್ಗಿಲ್ ವಿಜಯೋತ್ಸವ ದಿನಾಚರಣೆಯ ಅಂಗವಾಗಿ ನಿವೃತ್ತ ಸೇನಾನಿ ಕ್ಯಾ. ಸುದಾನಂದ ಪೆರುವಾಜೆ ಅವರನ್ನು ಅವರ ಮನೆಯಲ್ಲಿ ಶಾಲು ಹೊದಿಸಿ, ಫಲಪುಷ್ಪ ಸ್ಮರಣಿಕೆ ನೀಡಿ ಜು. 26ರಂದು ಗೌರವಿಸಲಾಯಿತು.

ಈ ಸಂಧರ್ಭದಲ್ಲಿ ಕಾರ್ಗಿಲ್ ವಿಜಯ ದಿವಸದ ಬಗ್ಗೆ ಲಯನ್ ಚೇತನ್ ಶೆಟ್ಟಿ ಪೆರುವಾಜೆ ಮಾಹಿತಿ ನೀಡಿದರು, ಕ್ಲಬ್‌ನ ಸ್ಥಾಪಕ ಅಧ್ಯಕ್ಷರಾದ ಲಯನ್ ವಿಠಲ ಶೆಟ್ಟಿಯವರು ಪ್ರಾಸ್ತಾವಿಕ ಮಾತುಗಳನ್ನಾಡಿ ಗೌರವ ಸಲ್ಲಿಸಿದರು. ಲಯನ್ ದಯಾಕರ ಆಳ್ವರು ಸ್ವಾಗತಿಸಿ, ಸುದಾನಂದರ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಲಯನ್ ಉಷಾ ಬಿ. ಭಟ್, ಲಯನ್ ವೆಂಕಟಕೃಷ್ಣ ರಾವ್, ಲಯನ್ ಭವಾನಿ ವಿಠಲ್ ಶೆಟ್ಟಿ , ಶ್ರೀಮತಿ ಯಶಸ್ವಿನಿ ಚೇತನ್ ಉಪಸ್ಥಿತರಿದ್ದು, ಸಹಕರಿಸಿದರು. ಕ್ಲಬ್‌ನ ಕಾರ್ಯದರ್ಶಿ ದಯಾನಂದ ನಾಯ್ಕ್ ಮಠತಡ್ಕ ವಂದಿಸಿದರು.