ಬಾಳಿಲ: ವಿದ್ಯಾಬೋಧಿನೀ ಎಜುಕೇಶನಲ್ ಸೊಸೈಟಿಯ ನೂತನ ಅಧ್ಯಕ್ಷರಾಗಿ ರಾಧಾಕೃಷ್ಣ ರಾವ್ ಯು.

0

ವಿದ್ಯಾಬೋಧಿನೀ ಎಜುಕೇಶನಲ್ ಸೊಸೈಟಿಯ 2022-2023 ನೆ ಸಾಲಿನ ವಾರ್ಷಿಕ ಮಹಾಸಭೆಯು ಜು. 29ರಂದು ಜರುಗಿತು. 2023 -2026 ನೆ ಸಾಲಿನ ಮೂರು ವರ್ಷಗಳ ಅವಧಿಗೆ ನೂತನ ಆಡಳಿತ ಮಂಡಳಿಯನ್ನು ರಚಿಸಲಾಯಿತು.

ನಂತರ ನಡೆದ ಆಡಳಿತ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ರಾಧಾಕೃಷ್ಣ ರಾವ್ ಯು ರವರನ್ನು ಸರ್ವಾನುಮತದಿಂದ ಆರಿಸಲಾಯಿತು. ಉಪಾಧ್ಯಕ್ಷರಾಗಿ ಎಂ ಸುಬ್ರಹ್ಮಣ್ಯ ಮುಂಡುಗಾರು, ಕಾರ್ಯದರ್ಶಿ/ಸಂಚಾಲಕರಾಗಿ ಪಿ.ಜಿ.ಎಸ್.ಎನ್ ಪ್ರಸಾದ್, ಉಪಕಾರ್ಯದರ್ಶಿಯಾಗಿ ಭಾರತೀಶಂಕರ ಆದಾಳ, ಕೋಶಾಧಿಕಾರಿಯಾಗಿ ಕೈಂತಜೆ ರಾಮ ಭಟ್, ಸದಸ್ಯರಾಗಿ ಎನ್ ವೆಂಕಟ್ರಮಣ ಭಟ್, ಎನ್ ಕೃಷ್ಣ ಭಟ್ ಮತ್ತು ಡಾ. ಶ್ರೇಯಸ್ ಭಾರದ್ವಾಜ್ ಆಯ್ಕೆಯಾದರು. ಸ್ಥಾಪಕ ಸದಸ್ಯರಾದ ಗಣಪಯ್ಯ ಕಾಯಾರರವರು ಸಭೆಯಲ್ಲಿ ಉಪಸ್ಥಿತರಿದ್ದು, ಮಾರ್ಗದರ್ಶನ ನೀಡಿದರು.

ನಿರ್ಗಮನ ಅಧ್ಯಕ್ಷರಾದ ಎನ್ ವೆಂಕಟ್ರಮಣ ಭಟ್ ನೂತನ ಆಡಳಿತ ಮಂಡಳಿಗೆ ಶುಭ ಹಾರೈಸಿ, ಎಲ್ಲರ ಸಹಕಾರವನ್ನು ಸ್ಮರಿಸಿ ಮಾತನಾಡಿದರು. ಕಾರ್ಯದರ್ಶಿ ಪಿ.ಜಿ.ಎಸ್.ಎನ್ ಪ್ರಸಾದ್ ವಂದಿಸಿದರು.