ಕೊಲ್ಲಮೊಗ್ರು: ಕಡಂಬಳ ಸೇತುವೆ ಕೊಚ್ಚಿ ಹೋಗಿ ವರ್ಷ ಪೂರ್ತಿ

0

ಹೊಸ ಸೇತುವೆ ನಿಧಾನಗತಿ, ಶೀಘ್ರವಾಗಲು ಗಡಿಕಲ್ಲು ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಪ್ರಾರ್ಥನೆ

ಕೊಲ್ಲಮೊಗ್ರುವಿನ ಕಡಂಬಳ ಸೇತುವೆ ಕೊಚ್ಚಿ ಹೋಗಿ ವರ್ಷವಾಗಿದ್ದು ಶಾಶ್ವತ ವ್ಯವಸ್ಥೆ ಕೆಲಸ ಪ್ರಗತಿಯಲ್ಲಿದ್ದು ಅದು ಶೀಘ್ರವಾಗುವಂತೆ ಆ. 2 ರಂದು ಗಡಿಕಲ್ಲು ಶ್ರೀ ಮಹಾವಿಷ್ಣು ಮೂರ್ತಿ ದೈವಸ್ಥಾನದಲ್ಲಿ ಆ ಭಾಗದ ಫಲಾನುಭವಿಗಳು ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭ ಧನಂಜಯ ಪೆರ್ನಾಜೆ, ಗಿರೀಶ ಕಡಂಬಳ, ಸಂತೋಷ ಪೆರ್ನಾಜೆ, ಕುಸುಮಾಧರ ಪೀರನಮನೆ, ಗೋಪಾಲಕೃಷ್ಣ ಪೀರನಮನೆ, ಅಶ್ವಥ್ ಕೊಂಬೆಟ್ಟು, ಪ್ರಜ್ವಲ್ ಪೆರ್ನಾಜೆ, . ಕೃಷ್ಣ ಬೆಲ್ಚಪ್ಪಾಡ ಪನ್ನೆ, ಹರ್ಷಕುಮರ ಗದ್ದೆಮನೆ, ವಿಶ್ವನಾಥ ಪೆರ್ನಾಜೆ, ಕಮಲಾಕ್ಷ ಪೆರ್ನಾಜೆ ಮತ್ತಿತರರು ಉಪಸ್ಥಿತರಿದ್ದರು.