ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಕರಾಟೆ ಸ್ಪರ್ಧೆ ಯಲ್ಲಿ ಬಹುಮಾನ

0

ಪುತ್ತೂರು ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗಗಳ ಬಾಲಕ ಮತ್ತು ಬಾಲಕಿಯರ ಕರಾಟೆ ಸ್ಪರ್ಧೆ ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ನಡೆಯಿತು. ಸವಣೂರು ವಿದ್ಯಾರಶ್ಮಿ ವಿದ್ಯಾಲಯದ 9ನೆ ತರಗತಿಯ ಮೊಹಮ್ಮದ್ ಆವದ್ ಶಾ (ಅಶ್ರಫ್ ಎಂ. ಮತ್ತು ಅಪ್ಸಾ ಕೆ., ಮಾಂತೂರು ಇವರ ಮಗ) 62 ಕೆ.ಜಿ. ವಿಭಾಗದಲ್ಲಿ ದ್ವಿತೀಯ ಸ್ಥಾನ ಮತ್ತು 7ನೆ ತರಗತಿಯ ಹೃತೇಶ್ ಬಿ. ಎಸ್. (ಶ್ರೀಧರ್ ಬಿ. ಎ. ಮತ್ತು ರಮ್ಯಾ ಬಿ. ಎಸ್., ಮರಗೋಡು, ಮಡಿಕೇರಿ ಇವರ ಮಗ) 45 ಕೆ.ಜಿ. ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿಕೊಂಡಿದ್ದಾರೆ. ಇವರಿಗೆ ದಿನೇಶ್ ಅವರು ತರಬೇತಿ ನೀಡಿದ್ದರು. ವಿದ್ಯಾರಶ್ಮಿ ವಿದ್ಯಾಲಯದ ಸಿಬ್ಬಂದಿ ವರ್ಗದವರನ್ನು ಸಂಚಾಲಕ ಸವಣೂರು ಸೀತಾರಾಮ ರೈ ಅವರು ಅಭಿನಂದಿಸಿದ್ದಾರೆ.