ನಾಳೆ ದ.ಕ. ಸಂಪಾಜೆ ಪಂಚಾಯತ್ ಎದುರು ಮೂಲಭೂತ ಸೌಕರ್ಯಗಳ ಹಿತರಕ್ಷಣಾ ವೇದಿಕೆ ಮೌನ ಪ್ರತಿಭಟನೆ

0


ಸಂಪಾಜೆ ಗ್ರಾ.ಪಂ.ಆಡಳಿತ ಹಾಗೂ ಪಿ.ಡಿ.ಒ. ವರ್ತನೆ ವಿರುದ್ಧ ನಾಳೆ ಮೌನ ಪ್ರತಿಭಟನೆ ನಡೆಸಲು ಸಂಪಾಜೆಯ ಮೂಲಭೂತ ಸೌಕರ್ಯಗಳ ಹಿತರಕ್ಷಣಾ ವೇದಿಕೆ ನಿರ್ಧರಿಸಿದೆ.


ಸಂಪಾಜೆಯ ಇಬ್ರಾಹಿಂ ಮಾಸ್ಟರ್ ರವರು ತಮ್ಮ ಮಗಳ ಹೆಸರಿಗೆ ದಾನಪತ್ರ ನೀಡಿದ ಜಾಗದ ಖಾತಾ ಬದಲಾವಣೆಗೆ ಅರ್ಜಿ ನೀಡಿದ ಬಳಿಕ ಅಗತ್ಯವಿರುವ ಎಲ್ಲಾ ದಾಖಲೆ ಪತ್ರ ನೀಡಿದ್ದರೂ ವಿಳಂಬ ಧೋರಣೆ ಮಾಡುತ್ತಿರುವುದಲ್ಲದೆ, ಇಬ್ರಾಹಿಂ ಮಾಸ್ಟರ್ ರವರು ಕ್ಷಮೆ ಕೇಳದೆ ಅವರ ಕಡತ ವಿಲೇ ಮಾಡುವುದಿಲ್ಲವೆಂದು ಹೇಳುವುದರ ಮೂಲಕ ಪಿ.ಡಿ.ಒ. ಸರಿತಾ ಓಲ್ಗಾ ಡಿಸೋಜರವರು ಪ್ರಜಾಪ್ರಭುತ್ವ ವಿರೋದಿ ಧೋರಣೆ ತೋರುತ್ತಿದ್ದಾರೆ. ಇದನ್ನು ಖಂಡಿಸಿ ನಾಳೆ ಪಂಚಾಯತ್ ಎದುರು ಹಕ್ಕೊತ್ತಾಯ ಧರಣಿ ನಡೆಸಲು ನಿರ್ಧರಿಸಿರುವುದಾಗಿ ವೇದಿಕೆ ಅಧ್ಯಕ್ಷ ಕೆ.ಪಿ.ಜಾನಿ ತಿಳಿಸಿದ್ದಾರೆ.