ಬಾಳುಗೋಡಿನ ಪನ್ನೆ ಮಿತ್ತಕೆರೆ ದಂಡೆಯಲ್ಲಿ ಧ್ವಜಾರೋಹಣ

0

ಹರಿಹರ ಪಲ್ಲತಡ್ಕ ಗ್ರಾ.ಪಂ. ನ ಬಾಳುಗೋಡು ಪನ್ನೆ ಮಿತ್ತಕೆರೆ ಅಮೃತ ಸರೋವರ ದಂಡೆಯಲ್ಲಿ ಇಂದು ಧ್ವಜಾರೋಹಣ ಮಾಡಲಾಯಿತು.

ನಿವೃತ್ತ ಯೋಧ ಧನಂಜಯ ಅವರು ಧ್ವಜಾರೋಹಣ ಮಾಡಿದರು. ಈ ಸಂದರ್ಭ ಗ್ರಾ.ಪಂ ಅಧ್ಯಕ್ಷ ಜಯಂತ ಬಾಳುಗೋಡು, ನಿಯೋಜಿತ ಅಧ್ಯಕ್ಷ ವಿಜಯಕುಮಾರ್ ಅಂಙಣ, ಪಿಡಿಒ ಪುರುಷೋತ್ತಮ ಮಣಿಯಾನ ಮನೆ, ಗ್ರಾ.ಪಂ ಸದಸ್ಯರು ಗಳಾದ ದಿವಾಕರ ಮುಂಡಾಜೆ, ಪದ್ಮಾವತಿ ಕಲ್ಲೇಮಠ, ಗ್ರಾ.ಪಂ ಸಿಬ್ಬಂದಿಗಳು ಸ್ಥಳೀಯರು ಉಪಸ್ಥಿತರಿದ್ದರು. ಇದೇ ಸಂದರ್ಭ ಧನಂಜಯ ಅವರನ್ನು ಸನ್ಮಾನಿಸಲಾಯಿತು.