’ಕನಕಮಜಲು ಶ್ರೀ ಆತ್ಮರಾಮನ ಕನ್ನಡ ಭಕ್ತಿಗೀತೆ’ ಅಲ್ಬಮ್ ಹಾಡು ಲೋಕಾರ್ಪಣೆ

0


ಆರ್ ಪಿ ಕ್ರಿಯೇಷನ್ ಪಾಂಬಾರು ಅರ್ಪಿಸುವ, ಆತ್ಮರಾಮ ಗುಣಗಾನ ಕನಕಮಜಲು ಶ್ರೀ ಆತ್ಮರಾಮನ ಕನ್ನಡ ಭಕ್ತಿಗೀತೆ ಅಲ್ಬಮ್ ಹಾಡು ಆ. ೧೩ ರಂದು ಕನಕಮಜಲು ಅತ್ಮಾರಾಮ ಭಜನಾ ಮಂದಿರದಲ್ಲಿ ಲೋಕಾರ್ಪಣೆಗೊಂಡಿತು.


ಸಂಗೀತ ರತ್ನ ರವಿ ಪಾಂಬಾರು ನಿರ್ದೇಶನ ಹಾಗೂ ಧ್ವನಿ ನೀಡಿ ಸಹ ಗಾಯಕಿ ಲಾವಣ್ಯ ಕುಲಾಲ್ ಜೊತೆಗೂಡಿ, ಪೂರ್ಣಿಮಾ ಗಿರೀಶ್ ಗೌಡ ಕುತ್ತಿಮುಂಡ ಸಾಹಿತ್ಯ ಬರೆದು , ಸಿ ಕೆ ಮಾಸ್ತರ್ ಸುಳ್ಯ ಸಿನಿಮಾಟೋಗ್ರಾಪಿಯಲ್ಲಿ, ಅವನಿ ಯಂ ಯಸ್ ಸುಳ್ಯ, ತನ್ಮಯ್ ಸೋಮಯಾಗಿ, ಪೂಜಾಶ್ರೀ ಬಳ್ಳಡ್ಕ ಹಾಗೂ ಸಿ. ಕೆ. ಮಾಸ್ಟರ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹಾಗೂ ಸುಬ್ರಯ ಕಲ್ಪನೆ, ಶ್ರೀಧರ್ ಎಕ್ಕಡ್ಕ, ಲೋಹಿತ್ ಕುದ್ಕುಳಿ, ಅವಿನ್ ಮಳಿ, ಜಯಪ್ರಸಾದ್ ಕಾರಿಂಜ, ಗಿರೀಶ್ ಗೌಡ ಕುತ್ತಿಮುಂಡ ಈ ಹಾಡಿಗೆ ಸಹಕಾರ ನೀಡಿದ್ದಾರೆ. ಪ್ರಚಾರಕಲೆಯಲ್ಲಿ ರೋಹಿತ್ ಕುರಿಕ್ಕಾರ್ ಶ್ರೇಯ ಯಂ ಜಿ ಸುಳ್ಯ ಮಮತಾ ಮಡಿಕೇರಿ ಕಾರ್ಯ ನಿರ್ವಹಿಸಿದರು. ಆರ್ ಪಿ ಕ್ರಿಯೇಶನ್ ಯುಟ್ಯೂಬ್ ಚಾನೆಲ್‌ನಲ್ಲಿ ಮೂಡಿ ಬಂದಿದೆ.


ಈ ಸಂದರ್ಭದಲ್ಲಿ ಅರ್ಚಕರಾದ ಮನೋಜ್ ಕಲ್ಲೂರಾಯ, ಭಜನಾ ಮಂದಿರದ ಗೌರವಾಧ್ಯಕ್ಷ ಹರೀಶ್ ಮೂರ್ಚೆ, ಅಧ್ಯಕ್ಷ ವಸಂತ ಮಳಿ, ಕಾರ್ಯದರ್ಶಿ ಈಶ್ವರ ಕೊರ್ಬ೦ಡ್ಕ, ಮಹೋತ್ಸವ ಸಮಿತಿಯ ಪದಾಧಿಕಾರಿಗಳಾದ ವಸಂತ ಗಬ್ಬಲಡ್ಕ, ದಾಮೋದರ ಕಣಜಾಲು, ಆನಂದ ಮಾಸ್ತರ್ ಅಕ್ಕಿಯಲ್ಲಿ, ದಾಮೋದರ ಕೋಡ್ತಿಲು, ಜಗನ್ನಾಥ ಕಾಪಿಲ, ಕುಸುಮಾಧರ ಬೊಮ್ಮೆಟ್ಟಿ, ವಿಜಯಕುಮಾರ್ ನರಿಯೂರು, ಶ್ರೀಮತಿ ಕುಸುಮ ಅಡ್ಕಾರ್, ಶ್ರೀಮತಿ ರಾಜೀವಿ ಕೊಳ್ದುಮಜಲು, ಶ್ರೀಮತಿ ಪ್ರೇಮ ಅಡ್ಕಾರ್, ಶ್ರೀಮತಿ ಶ್ಯಾಮಲ ಪೆರುಂಬಾರ್, ಶ್ರೀಮತಿ ನಳಿನಾಕ್ಷಿ ಪಲ್ಲತ್ತಡ್ಕ, ಲೋಹಿತ್ ಕುಮಾರ್ ಕುದ್ಕುಳಿ, ಗಿರೀಶ್ ಕುತ್ತಿಮುಂಡ, ಜಯಪ್ರಸಾದ್ ಕಾರಿಂಜ, ಬಾಲಚಂದ್ರ ಮಾಣಿಮಜಲು, ಶ್ರೀಧರ ನರಿಯೂರು, ಇಂದಿರೇಶ ಕೊಬ೯೦ಡ್ಕ, ತನುಷ್ ಕೊಬ೯೦ಡ್ಕ, ಶ್ರೀಮತಿ ವಿಮಲ ಅಕ್ಕಿಮಲೆ, ಶ್ರೀಮತಿ ಕವಿತಾ ಪೆರುಂಬಾರ್, ಶ್ರೀಮತಿ ಉಮಾಪತಿ ಕೋಳ್ದುಮಜಲು, ಚಂದ್ರಶೇಖರ್ ನೇಡಿಲು, ಸಮೃದ್ದ್ ಕೊರ್ಬ೦ಡ್ಕ, ಬಾಲಚಂದ್ರ ನೇಡಿಲು, ಅವಿನ್ ಮಳಿ ಉಪಸ್ಥಿತರಿದ್ದರು.