ಕೊಡಪಾಲದಲ್ಲಿ ಕೊರತ್ತೋಡಿ ‌ಕುಟುಂಬಸ್ಥರ ಆಟಿ ಪರ್ಬ

0

ನೆಲ್ಲೂರು ಕೆಮ್ರಾಜೆ ಗ್ರಾಮದ ಕೊಡಪಾಲದಲ್ಲಿ ಕೊರತ್ತೋಡಿ ‌ಕುಟುಂಬಸ್ಥರ ಆಟಿ ಪರ್ಬ ನಮ್ಮ‌ ಕುಟುಂಬ ಕಾರ್ಯಕ್ರಮವು ಕೊಡಪಾಲ ಕೇಶವ ಬಾಳೆಗುಂಡಿಯವರ ಮನೆಯಲ್ಲಿ ಆ.13ರಂದು ನಡೆಯಿತು.

ಕಾರ್ಯಕ್ರಮ ಅಧ್ಯಕ್ಷತೆಯನ್ನು ಕೇಶವ ಕೊಡಪಾಲ‌ ವಹಿಸಿದ್ದರು.‌ ಮಂಗಳೂರಿನ‌ ಖ್ಯಾತ ವೈದ್ಯರಾದ ಡಾ.ಶ್ರೀರಾಂ ಭಟ್ ಉದ್ಘಾಟನೆ ನೆರವೇರಿಸಿದರು. ವೇದಿಕೆಯಲ್ಲಿ ವೈದ್ಯೆ ಮೀರಾ ಶ್ರೀರಾಂ ಭಟ್, ದೇವಚಳ್ಳ ಗ್ರಾ.ಪಂ. ಉಪಾಧ್ಯಕ್ಷೆ ಲೀಲಾವತಿ ಸೇವಾಜೆ, ಹಿರಿಯರಾದ ಗಂಗಾಧರ ಕೊರತ್ತೋಡಿ, ಈಶ್ವರ ಬಡ್ಡಡ್ಕ ಉಪಸ್ಥಿತರಿದ್ದರು.
ಶ್ರೀಧರ ಮಾಣಿಮರ್ಧು ಪ್ರಾಸ್ತಾವಿಕವಾಗಿ ಮಾತನಾಡಿದರು. ಕು| ಅನುಶ್ರೀ ಮುಂಡೋಡಿ ವರದಿ ವಾಚಿಸಿದರು. ಕುಶಾಲಪ್ಪ ಕಕ್ಕೆಬೆಟ್ಟು ಕಳೆದ ವರ್ಷದ ಕಾರ್ಯಕ್ರಮದ ಬಗ್ಗೆ‌ ಮೆಲುಕು ಹಾಕಿದರು. ಕು| ಅಶ್ವಿನಿ ಮುಂಡೋಡಿ ಆಟಿಯ ಬಗ್ಗೆ ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ದೇವಚಳ್ಳ ಗ್ರಾ.ಪಂ.ಗೆ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ ಲೀಲಾವತಿ ಸೇವಾಜೆಯವರನ್ನು ಗೌರವಿಸಲಾಯಿತು. ‌
ಕು| ಚೈತನ್ಯ ಪಾಡಾಜೆ ಸ್ವಾಗತಿಸಿದರು. ಕು| ಸೌಜನ್ಯ ಬಾಳೆಗುಂಡಿ ವಂದಿಸಿದರು.
ಕಾರ್ಯಕ್ರಮದ ಅಂಗವಾಗಿ ವಿವಿಧ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಮಧ್ಯಾಹ್ನ 25 ಬಗೆಯ ಆಟಿ‌ಯ ವಿವಿಧ ಖಾದ್ಯಗಳ ಸವಿಯೂಟ ಮಾಡಲಾಯಿತು.