ಆ.27 : ಐವರ್ನಾಡು ಗೆಳೆಯರ ಬಳಗ ದೇರಾಜೆ ವತಿಯಿಂದ

0

ಬೆನ್ನಿದ ನೆಲ ಗೊಬ್ಬುದ ಕಲ – 2023 ಕೆಸರುಗದ್ದೆ ಕ್ರೀಡಾಕೂಟ

ಐವರ್ನಾಡು ಗೆಳೆಯರ ಬಳಗ ದೇರಾಜೆ ವತಿಯಿಂದ 2 ನೇ ವರ್ಷದ ಬೆನ್ನಿದ ನೆಲ ಗೊಬ್ಬುದ ಕಲ ಕೆಸರುಗದ್ದೆ ಕ್ರೀಡಾಕೂಟವು ಆ.27 ರಂದು ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮುಂಭಾಗದ ಗದ್ದೆಯಲ್ಲಿ ನಡೆಯಲಿದೆ.


ಬೆಳಿಗ್ಗೆ 9.00 ಗಂಟೆಗೆ ಕ್ರೀಡಾಕೂಟ ಉದ್ಘಾಟನೆ ನಡೆಯಲಿದೆ.
ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಪದ್ಮನಾಭ ಭಟ್ ಉದ್ಘಾಟಿಸಲಿದ್ದಾರೆ.ಗೆಳೆಯರ ಬಳಗದ ಅಧ್ಯಕ್ಷ ಅರುಣ್ ಗುತ್ತಿಗಾರುಮೂಲೆ ಅಧ್ಯಕ್ಷತೆ ವಹಿಸಲಿದ್ದಾರೆ.ಈ ಸಂದರ್ಭದಲ್ಲಿ ಹಲವು ಜನ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಪುರುಷರಿಗೆ ಹ್ಯಾಂಡ್ ಬಾಲ್, ವಸಲಿಬಾಲ್ , ಜಗ್ಗಜಗ್ಗಾಟ (ಮುಕ್ತ) ಬುಗರಿ ಓಟ, ಸಾರ್ವಜನಿಕರಿಗೆ ನಿಧಿ ಶೋಧ, ಮಹಿಳೆಯರಿಗೆ ಹ್ಯಾಂಡ್ ಬಾಲ್, 100 ಮೀ .ಓಟ, ಜಗ್ಗಜಗ್ಗಾಟ (ಮುಕ್ತ)
ಬುಗರಿ ಓಟ ನಡೆಯಲಿದೆ.


ಮಕ್ಕಳಿಗೆ ಓಟ, ಜೋಡಿ ಓಟ ನಡೆಯಲಿದೆ.
ಪುರುಷರಿಗೆ ಪ್ರಥಮ ಬಹುಮಾನ 7077 ಹಾಗೂ ಟ್ರೋಫಿ,ದ್ವಿತೀಯ ಬಹುಮಾನ 5055 ಹಾಗೂ ಟ್ರೋಫಿ, ಮಹಿಳೆಯರಿಗೆ ಪ್ರಥಮ ಬಹುಮಾನ 3033, ದ್ವಿತೀಯ ಬಹುಮಾನ 2022 ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
ಸಂಜೆ ಗಂಟೆ 5.00 ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು ಐವರ್ನಾಡು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ ಸಭಾಧ್ಯಕ್ಷತೆ ವಹಿಸಲಿದ್ದಾರೆ.ವೇದಿಕೆಯಲ್ಲಿ ಹಲವು ಜನ ಗಣ್ಯರು ಉಪಸ್ಥಿತರಿರುವರು.