ಗುತ್ತಿಗಾರು : ಅಂಬೇಡ್ಕರ್ ರಕ್ಷಣಾ ವೇದಿಕೆ ಘಟಕ ಸಮಿತಿ ರಚನೆ

0

ಅಧ್ಯಕ್ಷರಾಗಿ ವಿಶ್ವನಾಥ ಚತ್ರಪ್ಪಾಡಿ, ಪ್ರಧಾನ ಕಾರ್ಯದರ್ಶಿ ವಸಂತ ಚತ್ರಪ್ಪಾಡಿ

ಅಂಬೇಡ್ಕರ್ ರಕ್ಷಣಾ ವೇದಿಕೆ ಸಂಘಟನೆಯ ಗುತ್ತಿಗಾರು ಘಟಕ ಸಮಿತಿ ರಚನಾ ಸಭೆ ಆ 20 ರಂದು ನಡೆಯಿತು.ಸಭಾ ಕಾರ್ಯಕ್ರಮವನ್ನು ಸ್ಥಳೀಯ ಮುಖಂಡರಾದ ಗಂಗಾಧರ ಚತ್ರಪ್ಪಾಡಿ ದೀಪ ಬೆಳಗಿಸಿ ಉದ್ಘಾಟಿಸಿದರು.

ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಸಂಘಟನೆಯ ಜಿಲ್ಲಾ ಅಧ್ಯಕ್ಷ ಸುಂದರ ಪಾಟಾಜೆ ಪುಷ್ಪ ನಮನ ಸಲ್ಲಿಸಿ ಸಂಘಟನೆಯ ಬಗ್ಗೆ ಮಾತನಾಡಿದರು. ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಸಮಿತಿ ಅಧ್ಯಕ್ಷ ರಮೇಶ್ ಕೊಡಂಕಿರಿ ವಹಿಸಿದ್ದರು.
ಈ ಸಂದರ್ಭದಲ್ಲಿ ಗುತ್ತಿಗಾರು ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಅಧ್ಯಕ್ಷರಾಗಿ ವಿಶ್ವನಾಥ ಚತ್ರಪ್ಪಾಡಿ. ಉಪಾಧ್ಯಕ್ಷ ದಿವಾಕರ,ಪ್ರಧಾನ ಕಾರ್ಯದರ್ಶಿಯಾಗಿ ವಸಂತ ಚತ್ರಪ್ಪಾಡಿ,ಜೊತೆ ಕಾರ್ಯದರ್ಶಿಗಳಾಗಿ ಪ್ರಕಾಶ್ ಚತ್ರಪ್ಪಾಡಿ,ಬಾಲಕೃಷ್ಣ ರವರನ್ನು ಆಯ್ಕೆ ಮಾಡಲಾಯಿತು.
ಇದೇ ವೇಳೆ ಮಹಿಳಾ ಘಟಕ ಸಮಿತಿ ರಚನೆ ಮಾಡಿ ಅಧ್ಯಕ್ಷರಾಗಿ ರಮಿತಾ ಆಚಳ್ಳಿ. ಉಪಾಧ್ಯಕ್ಷರಾಗಿ ಸೀತಮ್ಮ ಚತ್ರಪ್ಪಾಡಿ. ಕಾರ್ಯದರ್ಶಿ ಪೂರ್ಣಿಮಾ ರವರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಸ್ಥಳೀಯರಾದ ಕುಂಞಪ್ಪ,ಚಂದ್ರಶೇಖರ ಚತ್ರಪ್ಪಾಡಿ,ಪ್ರದೀಪ್,ಪ್ರಜ್ವಲ್, ನೇತ್ರಾವತಿ, ಚಂದ್ರಶೇಖರ ಕಮಿಲ,ಚಂದ್ರಾವತಿ, ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ದಿವಾಕರ ಸ್ವಾಗತಿಸಿ ವಂದಿಸಿದರು.