ಗುತ್ತಿಗಾರು ಮೆಟ್ಟಿನಡ್ಕ ಬಳಿ ಹೊಡೆದಾಟ ದೂರು ದಾಖಲು

0

ಗುತ್ತಿಗಾರಿನ ಮೆಟ್ಟಿನಡ್ಕ ಎಂಬಲ್ಲಿ ಆ. 23 ರ ಸಂಜೆ ಹೊಡೆದಾಟ ನಡೆದಿದ್ದು ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ದಾಖಲಾದ ಘಟನೆ ವರದಿಯಾಗಿದೆ.

ಮೆಟ್ಟಿನಡ್ಕದ ತಸ್ಲಿಮ್ ಎಂಬವರಿಗೆ ಜಯರಾಮ, ಲೊಕೇಶ್, ದಯಾನಂದ, ಮಂಜು ಹೊಡೆದಿರುವುದಾಗಿ ದೂರು ನೀಡಲಾಗಿದ್ದು ಈ ಬಗ್ಗೆ ಪ್ರಕರಣ ದಾಖಲಾಗಿರುವುದಾಗಿ ವರದಿಯಾಗಿದೆ. ಟೂರ್ ನ ವಿಚಾರವಾಗಿ ಪ್ರಶ್ನಿಸಿ ಹೊಡೆದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.