ಪ್ರಣವ ಸೌಹಾರ್ದ ಸಹಕಾರಿ ಸಂಘ-ಸುಳ್ಯ ಶಾಖಾ ವ್ಯವಸ್ಥಾಪಕರಾಗಿ ರಂಜಿತ್ ಅಡ್ತಲೆ ಮುಂಬಡ್ತಿ

0

ಮಂಗಳೂರಿನಲ್ಲಿ ಪ್ರಧಾನ ಕಛೇರಿ ಹೊಂದಿರುವ , ದಕ್ಷಿಣ ಕನ್ನಡ ಹಾಗೂ ಮೈಸೂರು ಜಿಲ್ಲೆಯಲ್ಲಿ ಶಾಖೆಗಳನ್ನು ಹೊಂದಿರುವ ಪ್ರಣವ ಸೌಹಾರ್ದ ಸಹಕಾರಿ ಸಂಘ ಇದರ ಸುಳ್ಯ ಶಾಖೆಯ ವ್ಯವಸ್ಥಾಪಕರಾಗಿ ರಂಜಿತ್ ಅಡ್ತಲೆ ಇವರು ಮುಂಬಡ್ತಿಗೊಂಡಿದ್ದಾರೆ.

ಇವರು ಕಳೆದ ಒಂದುವರೆ ವರ್ಷದಿಂದ ಸುಳ್ಯ ಶಾಖೆಯಲ್ಲಿ ಹಾಗೂ ಕಳೆದ ಮೂರು ತಿಂಗಳಿನಿಂದ ಮೈಸೂರಿನ ನೂತನ ಶಾಖೆಯಲ್ಲಿ ನಿಯೋಜನೆ ಮೇರೆಗೆ ಶಾಖಾ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿ ಈಗ ಸುಳ್ಯ ಶಾಖೆಯ ಶಾಖಾ ವ್ಯವಸ್ಥಾಪಕರಾಗಿದ್ದಾರೆ.

ಇವರು ಅರಂತೋಡು ಗ್ರಾಮದ ಧನಂಜಯ ಅಡ್ತಲೆ ಹಾಗೂ ಶ್ರೀಮತಿ ದಮಯಂತಿ ಇವರ ಪುತ್ರ.