ರೇಖಾ ಕೆರೆಮೂಲೆ ನಿಧನ

0

ನೆಲ್ಲೂರು ಕೆಮ್ರಾಜೆ ಗ್ರಾಮದ ಕೆರೆಮೂಲೆ ದಿ| ನಾರಾಯಣ ಪೂಜಾರಿ ಎಂಬವರ ಮಗಳು ರೇಖಾ ಎಂಬವರು ಅಲ್ಪ ಕಾಲದ ಅಸೌಖ್ಯದಿಂದ ನಿನ್ನೆ ರಾತ್ರಿ(ಆ.27) ಸುಳ್ಯದ ಆಸ್ಪತ್ರೆ ಯಲ್ಲಿ ನಿಧನರಾದರು. ಅವರಿಗೆ 35 ವರ್ಷ ಪ್ರಾಯವಾಗಿತ್ತು.
ರೇಖಾರವರು ಹೃದಯ ಸಂಬಂಧಿ ಅಸೌಖ್ಯತೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದರು.
ಅವಿವಾಹಿತರಾಗಿದ್ದ ಅವರು ತಾಯಿ ರೇವತಿ(ಲಲಿತಾ), ಸಹೋದರಿ ಜಯಂತಿ, ಚಿತ್ರ, ಸಹೋದರ ಸತೀಶ್ ಪೂಜಾರಿಯವರನ್ನು ಅಗಲಿದ್ದಾರೆ.