ಎಣ್ಮೂರು:ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಶ್ರೀ ಸೀತಾರಾಮಚಂದ್ರ ಸೇವಾ ಪ್ರತಿಷ್ಠಾನ ಎಣ್ಮೂರು ಇದರ ವತಿಯಿಂದ ನಡೆಯುವ 31ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಆ.27 ರಂದು ಜರುಗಿತು.


ಪುಣ್ಚತ್ತಾರು ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಡಾ. ದೇವಿಪ್ರಸಾದ್ ಕಾನತ್ತೂರ್ ರವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಗೊಳಿಸಿದರು.


ಶ್ರೀ ಸೀತಾರಾಮಚಂದ್ರ ಪ್ರತಿಷ್ಠಾನದ ಅಧ್ಯಕ್ಷ ರಘುನಾಥ ರೈ ಕಟ್ಟಬೀಡು, ಶ್ರೀಮತಿ ಶೋಭಾ ರಘುನಾಥ ರೈ, ಗಣೇಶೋತ್ಸವ ಸಮಿತಿಯ ಅಧ್ಯಕ್ಷ ದಾಮೋದರ ಗೌಡ ಚೆಕ್ಕಡ್ಕ,ಎಣ್ಮೂರು ಗ್ರಾಮ ಪಂಚಾಯತ್ ಸದಸ್ಯರಾದ ಮಾಯಿಲಪ್ಪ ಗೌಡ ಪಟ್ಟೆ , ಪ್ರಕಾಶ ರೈ ಕುಳಾಯಿತ್ತೋಡಿ, ಪ್ರಸಾದ್ ರೈ ಗುತ್ತು, ಗುರು ಕೃಪಾ ಡ್ರೈವಿಂಗ್ ಸ್ಕೂಲ್ ನ ಮಹೇಶ್, ಸುಬ್ರಹ್ಮಣ್ಯ ಮಣಿ ಲೈಟಿಂಗ್ಸ್ ,ಸದಾನಂದ ಆಚಾರ್ಯ ಕಾಣಿಯೂರು, ದೇವಿಪ್ರಸಾದ್. ಎಣ್ಮೂರು ,ಶ್ರೀರಾಮ ಮಕ್ಕಳ ಕುಣಿತ ಭಜನಾ ತಂಡದ ಸದಸ್ಯರು ಉಪಸ್ಥಿತರಿದ್ದರು