ಅಡ್ಕಾರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮೈದಾನದಲ್ಲಿ ರಕ್ಷಾಬಂಧನ ಆಚರಣೆ

0

ಜಾಲ್ಸೂರು ಗ್ರಾಮದ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಮೈದಾನದಲ್ಲಿ ರಕ್ಷಾಬಂಧನವನ್ನು ಆ.30ರಂದು ಆಚರಿಸಲಾಯಿತು.

ನ್ಯಾಯವಾದಿ ಜಗದೀಶ್ ಅವರು ಬೌದ್ಧಿಕ್ ನೀಡಿದರು. ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಗುರುರಾಜ್ ಭಟ್ ಅಡ್ಕಾರು, ಶರತ್ ಅಡ್ಕಾರು, ಗೋಪಾಲಕಾನ ಅಡ್ಕಾರು, ಹರ್ಷಿತ್ ಪೇರಾಲು, ಯತೀಂದ್ರ ಅಡ್ಕಾರು, ತಿರುಮಲೇಶ್ವರ ಕುತ್ಯಾಳ ಸೇರಿದಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.