ಸುಳ್ಯ ಸಿ.ಎ.ಬ್ಯಾಂಕ್ ಗೆ ಡಿಸಿಸಿ ಬ್ಯಾಂಕ್ ಪ್ರೋತ್ಸಾಹಕ ಪ್ರಶಸ್ತಿ

0

ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಸಿ.ಎ.ಬ್ಯಾಂಕ್) ಕ್ಕೆ ಡಿಸಿಸಿ‌ ಬ್ಯಾಂಕ್ ಪ್ರೋತ್ಸಾಹಕ ‌ಪ್ರಶಸ್ತಿ‌ ಲಭಿಸಿದೆ.

ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಡಿಸಿಸಿ ಬ್ಯಾಂಕ್ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ರವರು ಪ್ರಶಸ್ತಿ ವಿತರಿಸಿದರು. ಸಿ.ಎ. ಬ್ಯಾಂಕ್ ಅಧ್ಯಕ್ಷ ಬಾಲಗೋಪಾಲ ಸೇರ್ಕಜೆ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಸೂರ್ತಿಲ ಪ್ರಶಸ್ತಿ ಸ್ವೀಕರಿಸಿದರು. ‌ಸಿ.ಎ ಬ್ಯಾಂಕ್ ಉಪಾಧ್ಯಕ್ಷ ‌ಶೀನಪ್ಪ ಬಯಂಬು, ನಿರ್ದೇಶಕ ದಾಮೋದರ ಮಂಚಿ ಇದ್ದರು.