ಬಾಂಜಿಕೋಡಿ: ಶ್ರೀ ಶಿವ ಭಕ್ತವೃಂದ ಭಜನಾ ತಂಡ ರಚನೆ

0


ಐವರ್ನಾಡು ಗ್ರಾಮದ ಬಾಂ ಜಿಕೋಡಿ ಎಂಬಲ್ಲಿ ನೂತನವಾಗಿ ಶ್ರೀ ಶಿವ ಭಕ್ತವೃಂದ ಭಜನಾ ತಂಡ ರಚನೆ ಮಾಡಲಾಯಿತು.

ಈ ಭಜನಾ ತಂಡದ ಅಧ್ಯಕ್ಷರಾಗಿ ಚಿದಾನಂದ ಪಿ ಟಿ ಬಾಂಜಿಕೋಡಿ ಕಾರ್ಯದರ್ಶಿಯಾಗಿ ವೆಂಕಟರಮಣ ಕಂಡಿಗೆಮೂಲೆ, ಖಜಾಂಜಿಯಾಗಿ ಕಿಶನ್ ಆಚಾರ್ಯ ಖಂಡಿಗೆಮೂಲೆ, ಉಪಾಧ್ಯಕ್ಷರಾಗಿ ನವೀನ್ ಬಿ ಆರ್. ಬಾಂಜಿಕೋಡಿ, ಜತೆ ಕಾರ್ಯದರ್ಶಿಯಾಗಿ ಮನೋಹರ ಬಿ ಕೆ., ಬಾಂಜಿಕೋಡಿ ಹಾಗೂ ತಂಡದ ಸದಸ್ಯರಾಗಿ ಶ್ರೀಧರ ಖಂಡಿಗೆಮೂಲೆ, ಶಿವರಾಮ ಆಚಾರ್ಯ ಖಂಡಿಗೆಮೂಲೆ, ವಿಜಿತ್ ಪಿ ಗುಡ್ಡೆಮನೆ, ಲವ ಕುಮಾರ್ ಜಿ ಗುಡ್ಡೆಮನೆ, ದಿನೇಶ್ ಆಚಾರ್ಯ ನಾಟಿಕೇರಿ ಯವರನ್ನು ಆಯ್ಕೆ ಮಾಡಲಾಯಿತು.

ಈ ತಂಡದ ಪ್ರಥಮ ಭಜನಾ ಸೇವೆಯನ್ನು ಶ್ರೀ ಕ್ಷೇತ್ರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಐವರ್ನಾಡು ಇಲ್ಲಿನ ಪ್ರಧಾನ ಅರ್ಚಕರಾದ ಪದ್ಮನಾಭ ಭಟ್ ಇವರ ಪ್ರಾರ್ಥನೆಯ ಮೂಲಕ ಭಜನಾ ಸೇವೆಯನ್ನು ಶ್ರೀ ಕ್ಷೇತ್ರದಲ್ಲಿ ನಡೆಸಿಕೊಟ್ಟರು.

ಎರಡನೆಯ ಭಜನಾ ಸೇವೆಯನ್ನು ತಂಡದ ಕಾರ್ಯದರ್ಶಿಯಾದ ವೆಂಕಟರಮಣ ಖಂಡಿಗೆಮೂಲೆ ಇವರ ಮನೆಯಲ್ಲಿ ನಡೆಸಲಾಯಿತು. ಹಾಗೂ ಮೂರನೇ ಭಜನೆ ಸೇವೆಯನ್ನು ತಂಡದ ಅಧ್ಯಕ್ಷರಾಗಿರುವ ಚಿದಾನಂದ ಪಿ ಟಿ ಬಾಂಜಿಕೋಡಿ ಇವರ ಮನೆಯಲ್ಲಿ ನಡೆಸುವುದು ಎಂದು ತೀರ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಭಜನಾ ತಂಡದ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು
.