ಬೆಳ್ತಂಗಡಿ ಸೌಜನ್ಯ ಹತ್ಯೆ ಆರೋಪಿಗಳನ್ನು ಪತ್ತೆ ಹಚ್ಚಲು ಆಗ್ರಹಿಸಿ ಒಕ್ಕಲಿಗರ ಹೋರಾಟ ಸಮಿತಿಯಿಂದ ಮಂಗಳೂರಿನಲ್ಲಿ ಸೆ.12-13ರಂದು ಧರಣಿ

0

ತನಿಖಾಧಿಕಾರಿಗಳನ್ನು ಕೂಡಾ ತನಿಖೆ ನಡೆಸಲು ಆಗ್ರಹ

ಬೆಳ್ತಂಗಡಿಯ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ನಡೆಸಿದ ಆರೋಪಿಗಳನ್ನು ಪತ್ತೆ ಹಚ್ಚಿ ಅವರಿಗೆ ಕಠಿಣ ಶಿಕ್ಷೆಗೊಳಪಡಿಸಬೇಕು ಹಾಗೂ ತನಿಖಾಧಿಕಾರಿ ಹಾಗೂ ವೈದ್ಯರನ್ನು ಕೂಡಾ ತನಿಖೆಗೊಳಪಡಿಸಬೇಕೆಂದು ಆಗ್ರಹಿಸಿರುವ ದ.ಕ. ಜಿಲ್ಲಾ ಒಕ್ಕಲಿಗರ ಹೋರಾಟ ಸಮಿತಿ ಎರಡು ದಿನ ಧರಣಿ ನಡೆಸಲು ನಿರ್ಧರಿಸಿದೆ.

ಸೆ.12 ಮತ್ತು 13ರಂದು ಮಂಗಳೂರಿನ ಕ್ಲಾಕ್ ಟವರ್ ಹತ್ತಿರವಿರುವ ತಾಲೂಕು ಕಚೇರಿಯ ಸಮೀಪ ಎರಡು ದಿನಗಳ ಕಾಲ ಬೆಳಗ್ಗೆ ೧೦ ಗಂಟೆಯಿಂದ ೫ ರ ತನಕ ಧರಣಿ ನಡೆಸಲು ತೀರ್ಮಾನಿಸಿದೆ ಎಂದು ಹೋರಾಟ ಸಮಿತಿ ಸಂಚಾಲಕ ಡಿ.ಬಿ.ಬಾಲಕೃಷ್ಣ ಗೌಡರು ತಿಳಿಸಿದ್ದಾರೆ.

ಸೆ.೧೨ರಂದು ಮಂಗಳೂರು, ಬೆಳ್ತಂಗಡಿ, ವಿಟ್ಲ ಹಾಗೂ ಬಂಟ್ವಾಳ ತಾಲೂಕಿನ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದವರು ಭಾಗವಹಿಸಲಿದ್ದಾರೆ. ಸೆ.೧೩ರಂದು ಪುತ್ತೂರು, ಕಡಬ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ ಹಾಗೂ ಸುಳ್ಯದ ಗೌಡರ ಯುವ ಸೇವಾ ಸಂಘ ಹಾಗೂ ಬೆಳ್ತಂಗಡಿಯ ಒಕ್ಕಲಿಗರ ಗೌಡರ ಸಂಘದವರು ಭಾಗವಹಿಸಲಿದ್ದಾರೆ.