ಬೊಳ್ಳಾಜೆ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

0

ನೆಲ್ಲೂರು ‌ಕೆಮ್ರಾಜೆ‌ ಗ್ರಾಮದ ಶ್ರೀ ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ‌ಯ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ29ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯು ಸೆ.6ರಂದು ನಡೆಯಿತು. ‌ಬೆಳಿಗ್ಗೆ ಉದ್ಘಾಟನಾ ಕಾರ್ಯಕ್ರಮ ನಡೆಯಿತು.‌

ಉದ್ಘಾಟನೆಯನ್ನು ಬೊಳ್ಳಾಜೆ‌ ಶಾಲಾ ಆಡಳಿತ ಮಂಡಳಿ‌ ಪ್ರಧಾನ‌ ಕಾರ್ಯದರ್ಶಿ ಅನಂತ ಭಟ್ ಕನಿಯಾಲ‌ ನೆರವೇರಿಸಿದರು. ಹಳೆ‌ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜಶೇಖರ ಬೊಳ್ಳಾಜೆ‌ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ‌ ಅತಿಥಿಗಳಾಗಿ ಜನಜಾಗೃತಿ ವೇದಿಕೆ ದೊಡ್ಡತೋಟ ವಲಯದ ಅಧ್ಯಕ್ಷ ರಾಜಾರಾಂ‌ ಭಟ್ ಬೆಟ್ಟ, ಬೊಳ್ಳಾಜೆ ಶಾಲಾ‌ ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ಯಾಮಲಾ ಎ.ವಿ. ಬೊಳ್ಳಾಜೆ, ಮುಖ್ಯ‌ಶಿಕ್ಷಕ ಸೀತಾರಾಮ‌‌ ಸಿ.ಎನ್.,

ಒಡಿಯೂರು ಗ್ರಾಮ‌ ವಿಕಾಸ ಯೋಜನೆಯ ಬೊಳ್ಳಾಜೆ ಘಟ ಸಮಿತಿ‌ ಅಧ್ಯಕ್ಷ ಸೀತಾರಾಮ ಚೆನ್ನಡ್ಕ ಮುಖ್ಯ ಅತಿಥಿಗಳಾಗಿದ್ದರು. ಕಾರ್ಯಕ್ರಮದ ಪ್ರಯುಕ್ತ ಮೊಸರು‌ ಕುಡಿಕೆ(ಎಣ್ಣೆ ಕಂಬ), ಅಟ್ಟಿ‌ಮಡಿಕೆ, ಕ್ರೀಡಾ ಸ್ಪರ್ಧೆಗಳು ನಡೆಯಿತು.

ಅಟ್ಟಿ‌ ಮಡಿಕೆಯಲ್ಲಿ ಶ್ರೀ ಶಾಸ್ತಾವು ಯುವಕ ಮಂಡಲ ಪ್ರಥಮ ಸ್ಥಾನ ಪಡೆದುಕೊಂಡರು.ಸಂಜೆ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ‌ಹಳೆ‌ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜಶೇಖರ ಬೊಳ್ಳಾಜೆ‌ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಾಲಿಬಾಲ್‌ ಅಸೋಸಿಯೇಷನ್ ಬೆಂಗಳೂರು ಇದರ ಅಸೀಸಿಯೇಟ್ ಸಕ್ಯುರಿಟಿ ಜಯಪ್ರಕಾಶ್ ರೈ, ಜಿ.ಪಂ. ಮಾಜಿ‌ ಸದಸ್ಯ ಹರೀಶ್ ಕಂಜಿಪಿಲಿ, ನೆಲ್ಲೂರು ಕೆಮ್ರಾಜೆ ಗ್ರಾ.ಪಂ.‌ಅಧ್ಯಕ್ಷ ಧನಂಜಯ ಕುಮಾರ್ ಕೋಟೆಮಲೆ,

ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ದಯಾನಂದ‌ ಕೊರತ್ತೋಡಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ನಿವೃತ್ತ ಅಟೆಂಡರ್‌ ಚನಿಯಪ್ಪ ನಾಯ್ಕ‌ ಚೆನ್ನಡ್ಕ, ನಿವೃತ್ತ ಶಿಕ್ಷಕಿ ರತ್ನಾವತಿ ಕನಿಯಾಲ ರವರನ್ನು ಹಳೆ‌ವಿದ್ಯಾರ್ಥ ಸಂಘದ ವತಿಯಿಂದ ಸನ್ಮಾನಿಸಲಾಯಿತು. ‌ಅಂಗನವಾಡಿ ಕಾರ್ಯರ್ತೆ ದೇವಕಿ ಸ್ವಾಗತಿಸಿ, ಕಾರ್ಯದರ್ಶಿ ಪ್ರಮೋದ್ ಬೊಳ್ಳಾಜೆ ‌ವಂದಿಸಿದರು. ಜಯರಾಮ ಹೈದಂಗೂರು ಕಾರ್ಯಕ್ರಮ ನಿರೂಪಿಸಿದರು. ‌ಇದೇ ಸಂದರ್ಭದಲ್ಲಿ ಸ್ಪರ್ಧೆ ಗಳಲ್ಲಿ‌ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.