ಸಾವಿತ್ರಿಭಾಯಿ ಫುಲೆ ರಾಷ್ಟ್ರೀಯ ಪ್ರಶಸ್ತಿಗೆ ಪರಿಮಳ ಎನ್.ಎಂ. ಆಯ್ಕೆ

0

ನಾಡಿನ ಸಮಾಚಾರ ಸೇವಾ ಸಂಘ (ರಿ.) ಗೋಕಾಕ ಹಾಗೂ ನಾಡಿನ ಸಮಾಚಾರ ದಿನಪತ್ರಿಕೆಯ ಸಂಯುಕ್ತ ಆಶ್ರಯದಲ್ಲಿ ಶಿಕ್ಷಣ ಹಾಗೂ ಸಾಹಿತ್ಯ ಸೇವೆಗಾಗಿ ನೀಡಲಾಗುವ ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಪ್ರಶಸ್ತಿಗೆ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಕನ್ನಡ ಶಿಕ್ಷಕಿ ಪರಿಮಳ ಎನ್.ಎಂ. ಆಯ್ಕೆಯಾಗಿದ್ದಾರೆ.

ಸೆ.24ರಂದು ಬೆಳಗಾವಿಯಲ್ಲಿ ನಡೆಯಲಿರುವ ಗುರುವಂದನೆ ಹಾಗೂ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಉದಯೋನ್ಮುಖ ಕವಯತ್ರಿ ಪರಿಮಳ ಎನ್.ಎಂ. ಅವರು ಸಾಂಸ್ಕೃತಿಕ ಕಲಾಪ್ರಾಕಾರಗಳಲ್ಲಿ ಪಾಂಡಿತ್ಯ ಹೊಂದಿದ್ದಾರೆ. ರಂಗೋಲಿ, ಅಭಿನಯ ಗೀತೆ, ನೃತ್ಯ ನಾಟಕಗಳು ಇವರ ಮೆಚ್ಚಿನ ಕ್ಷೇತ್ರ. ಹಲವು ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾರ್ಗದರ್ಶನ ನೀಡಿದ್ದಾರೆ. ಪ್ರತಿಭಾ ಕಾರಂಜಿ ಸೇರಿದಂತೆ ಹಲವು ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ್ದಾರೆ. ಅಲ್ಲದೆ ತಮಿಳು ಕಲಾವಿದರ ವೇದಿಕೆಯ ಉಪಾಧ್ಯಕ್ಷೆಯಾಗಿ, ಕೆರಿಯರ್ ಗೈಡೆನ್ಸ್ , ಚಂದನ ಸಾಹಿತ್ಯ ವೇದಿಕೆ, ಕೆಎಫ್‌ಡಿಸಿ ಇನ್‌ಶೂರೆನ್ಸ್ ಗ್ರೂಪ್‌ನ ಸಕ್ರಿಯ ಸದಸ್ಯೆಯಾಗಿ ಸಮಾಜಸೇವೆ ಮಾಡುತ್ತಿದ್ದುö, ಸಾಹಿತ್ಯ ಕಲಾ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.