ದೇವರ ಭಯವೇ ಜ್ಞಾನದ ಆರಂಭ : ಡಾ. ಸಾಯಿಗೀತಾ

0

ಮೊದಲ ಪೂಜೆ ಸಲ್ಲುವುದು ಗಣಪತಿಗೆ. ಅವನು ವಿಘ್ನ ನಿವಾರಕ. ದೇವರ ನಿರಂತರ‌ ಧ್ಯಾನದಿಂದ ನಮ್ಮ ಇಷ್ಟಾರ್ಥಗಳು ನೆರವೇರುತ್ತದೆ ಎಂದು ಸುಳ್ಯ ಉದ್ಯಾನವನ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸಾಯಿಗೀತಾ ಹೇಳಿದರು.

ಅವರು ಅಜ್ಜಾವರ ಚೈತನ್ಯ ಸೇವಾಶ್ರಮದ ಸ್ವಾಮೀಜಿ ಶ್ರೀ ಯೋಗೇಶ್ವರಾನಂದ ಸರಸ್ವತಿ ಸ್ವಾಮೀಜಿಯವರ 196ನೇ ಕೃತಿಮಾಲೆ ದೇವರ ನಾಡು
ಬಿಡುಗಡೆಗೊಳಿಸಿ ಮಾತನಾಡಿದರು. ಆಶ್ರಮದ ಸ್ಬಾಮೀಜಿ‌ ಶ್ರೀ ಯೋಗೇಶ್ವರಾನಂದ ಸರಸ್ವತಿಯವರು ತಮ್ಮ ಕೃತಿಯ
ಹಿನ್ನೆಲೆಯನ್ನು ತಿಳಿಸಿದರು.


ಮುಖ್ಯ ಅತಿಥಿಯಾಗಿ ಚಿನ್ನಪ್ಪ ಗೌಡ ಪೇರಾಲು, ಆಶ್ರಮದ ಗ್ರಂಥ ಪ್ರಕಟಣೆ ವಿಭಾಗದ ಮುಖ್ಯಸ್ಥ ರಾದ ಅನಿಲ್ ಬಿ.ವಿ ಉಪಸ್ಥಿತರಿದ್ದರು.
ಆಶ್ರಮದ ಟ್ರಸ್ಟಿ ಪ್ರಣವಿ ಸ್ವಾಗತಿಸಿ, ವಂದಿಸಿದರು. ಪ್ರೋ.ರೇಖಾ ಕಾರ್ಯಕ್ರಮ ನಿರೂಪಿಸಿದರು.
ಬೆಳಿಗ್ಗೆ ಗಣಪತಿ ಪೂಜೆ ಭಜನಾ ಸತ್ಸಂಗ ನಡೆಯಿತು. ಮಧ್ಯಾಹ್ನ ಶ್ರೀ ಭಗವತಿ ದೇವಿಗೆ ಮಹಾಪೂಜೆ ನಡೆಯಿತು. ಅನೇಕ ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.