ಸಂಪಾಜೆ: ಅಸೌಖ್ಯದಿಂದ ಮೃತಪಟ್ಟ ವ್ಯಕ್ತಿಯ ಮನೆಯವರಿಗೆ ಸಂಪಾಜೆ ಗ್ರಾಮೀಣ ಬ್ಯಾಂಕಿನಿಂದ ಚೆಕ್ ಹಸ್ತಾಂತರ

0

ಕೊಡಗು ಸಂಪಾಜೆ ಗ್ರಾಮದ ಕೊಯನಾಡಿನ ಮನೋಹರ ರೈ ಎಂಬವರು ಸಂಪಾಜೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ಖಾತೆ ಹೊಂದಿದ್ದು, ಅಸೌಖ್ಯದಿಂದ ಅವರು ಮೃತಪಟ್ಟ ಹಿನ್ನೆಲೆಯಲ್ಲಿ ಅವರ ಖಾತೆಗೆ ಅನುಸಾರವಾಗಿ ಕರ್ನಾಟಕ ಗ್ರಾಮೀಣ ಬ್ಯಾಂಕಿನ ವಿಮೆ ಮತ್ತು ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆ ಎರಡು ಸೇರಿ ಒಟ್ಟು ಮೊತ್ತ 3 ಲಕ್ಷದ 30 ಸಾವಿರ ಮೊತ್ತವನ್ನು ಮೃತರ ತಾಯಿ ಭವಾನಿ ರೈ ಅವರಿಗೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ವತಿಯಿಂದ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಶಾಖೆ ವ್ಯವಸ್ಥಾಪಕ ಜಯಪ್ರಕಾಶ್, ಸಿಬ್ಬಂದಿಗಳಾದ ಪ್ರಕಾಶ್ ರಾವ್ ಪಿ. ಬಿ., ರಂಜನ್ ಬಿ. ಎಮ್ ಮತ್ತು ರಿಲೇಶನ್ ಶಿಪ್ ಆಪಿಸರ್ ಶಶಾಂಕ್ ಉಪಸ್ಥಿತರಿದ್ದರು.