ಸುಬ್ರಹ್ಮಣ್ಯ: ಡಾlವಿದ್ಯಾಪ್ರಸನ್ನ ತೀರ್ಥ ಶ್ರೀಪಾದರ 27 ನೇ ಚಾತುರ್ಮಾಸ್ಯ ಸಮಾಪ್ತಿ

0

ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಮಠಾಧೀಶರಾದ ಡಾ. ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರ ಚಾತುರ್ಮಾಸ್ಯ ಇಂದು ಸಮಾಪ್ತಿಯಾಯಿತು. ಶ್ರೀಪಾದರ ೨೭ ನೆಯ ಚಾತುರ್ಮಾಸ್ಯವನ್ನು ಆ.೧೫ ರಂದು ಆರಂಭಿಸಿದ್ದರು. ಅಧಿಕ ಮಾಸದ ಚಾತುರ್ಮಾಸ್ಯ ಇದಾಗಿದ್ದು ಸುಮಾರು ೪೫ ದಿನಗಳ ವೃತಾಚರಣೆ ಮಾಡಿದ್ದರು. ಧಾರ್ಮಿಕ ವಿಧಿಗಳನ್ನು ಪೂರೈಸಿ ದರ್ಪಣ ತೀರ್ಥ ನದಿಯಲ್ಲಿ ಪೂಜೆ ಸಲ್ಲಿಸಿ ಸೀಮೋಲ್ಲಂಘನೆ ಮಾಡಿದರು.