ಪೆರುವಾಜೆ ಗ್ರಾಮಕ್ಕೆ ಬೆಳ್ಳಾರೆ ಗ್ರಾಮ ಸಹಾಯಕರ ನಿಯೋಜನೆ

0

ಕೊಡಿಯಾಲ ರಾಮ ಬೈರ ಅವರ ಮನೆ ವರದಿ ನೀಡಲು ಪಂಚಾಯತ್ ಗೆ ಸೂಚನೆ

ಜಿಲ್ಲಾ ಜನತಾ ದರ್ಶನದಲ್ಲಿ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಮಾಡಿರುವ ಪೆರುವಾಜೆ ಗ್ರಾಮಕ್ಕೆ ಗ್ರಾಮ ಸಹಾಯಕರ ನಿಯೋಜನೆಗೆ ಬೆಳ್ಳಾರೆ ಗ್ರಾಮ ಸಹಾಯಕರಿಗೆ ಪೆರುವಾಜೆ ಗ್ರಾಮಕ್ಕೆ ಹೆಚ್ಚುವರಿ ನೀಡಿದ್ದು ಮತ್ತು ಕೊಡಿಯಾಲ ಗ್ರಾಮದ ರಾಮ ಬೈರ ಅವರಿಗೆ ಮನೆ ನೀಡಲು ಮನವಿ ಮಾಡಿದಂತೆ ಕೂಡಲೇ ವರದಿ ನೀಡಲು ಸುಳ್ಯ ತಾಲೂಕು ತಹಶೀಲ್ದಾರ್ ಅವರು ಕೊಡಿಯಾಲ ಗ್ರಾಮ ಪಂಚಾಯತಿಗೆ ಸೂಚನೆ ನೀಡಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮಾಜಿ ಜಿಲ್ಲಾಧ್ಯಕ್ಷ ಸಚಿನ್ ರಾಜ್ ಶೆಟ್ಟಿ ತಿಳಿಸಿದ್ದಾರೆ.

ಮುರ್ಕೆತ್ತಿ ಭಾಗಕ್ಕೆ 2 ಹೊಸ ಟಿಸಿ ಹಾಕಲು ಸರ್ವೆ ನಡೆಸಲು ಮೆಸ್ಕಾಂ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಪೆರುವಾಜೆ ಪ್ರಥಮ ದರ್ಜೆ ಕಾಲೇಜು ಹತ್ತಿರ ಟಿಸಿ ಬೇಡಿಕೆ ಈಡೇರಿದೆ. ದುರ್ಗಾನಗರ ಹತ್ತಿರ ಹಳೆಯ ವಿದ್ಯುತ್ ತಂತಿ ಬದಲಾವಣೆ ಕಾರ್ಯ ಆಗಲಿದೆ.