ಮಾವಿನಕಟ್ಟೆ : ಅಗ್ನಿಪಥ್ ಗೆ ಆಯ್ಕೆಯಾದ ಅಭಿಷೇಕ್ ಮಾವಿನಕಟ್ಟೆ ಯವರಿಗೆ ವಿಷ್ಣು ಸೇವಾ ಸಮಿತಿ ವತಿಯಿಂದ ಅಭಿನಂದನೆ

0

ಅಗ್ನಿಪಥ್ ಗೆ ಆಯ್ಕೆಯಾದ ಮಾವಿನಕಟ್ಟೆ ಯ‌ ಆನಂದ ಬೆಳಪ್ಪಾಡ ಇವರ ಪುತ್ರ ಅಭಿಷೇಕ್ ಮಾವಿನಕಟ್ಟೆ ಇವರಿಗೆ ವಿಷ್ಣು ಸೇವಾ ಸಮಿತಿ ವತಿಯಿಂದ ಅಭಿನಂದನಾ ಕಾರ್ಯಕ್ರಮ ಇಂದು ಮಾವಿನಕಟ್ಟೆ ಉದಯಗಿರಿ‌ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ನಡೆದ ಸಂಕ್ರಮಣ ಪೂಜೆಯ ಬಳಿಕ ನಡೆಸಲಾಯಿತು.

ವಿಷ್ಣು ಸೇವಾ ಸಮಿತಿ ಅಧ್ಯಕ್ಷ ಹರಿಶ್ಚಂದ್ರ ಕೇಪಲಕಜೆಯವರು ಶಾಲು ಹೊದಿಸಿ ಫಲತಾಂಬೂಲ, ಸ್ಮರಣಿಕೆ ನೀಡಿ‌ ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಾವಿನಕಟ್ಟೆ ಶ್ರೀ ಮಹಾವಿಷ್ಣು ದೈವಸ್ಥಾನದ ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಮಾವಿನಕಟ್ಟೆ ಹಾಗೂ ಸದಸ್ಯರು, ವಿಷ್ಣು ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೃಷ್ಣ ಕುಮಾರ್ ನಾರ್ಣಕಜೆ ಮತ್ತು ಸದಸ್ಯರು ಹಾಗೂ ತಿಯಾ ಸಮಾಜದ ಬಾಂಧವರು ಕ್ಷೇತ್ರದ ಭಕ್ತಾಧಿಗಳು ಉಪಸ್ಥಿತರಿದ್ದರು.