ದಸರಾ ಶೋಭಾಯಾತ್ರೆ: ಜನಸಾಗರದ ಮಧ್ಯೆ ಸಾಗಿದ ಆಂಬುಲೆನ್ಸ್

0

ಕ್ಷಣಾರ್ಧದಲ್ಲಿ ಸರಾಗವಾಗಿ ಸಾಗಲು ದಾರಿ ಮಾಡಿಕೊಟ್ಟ ಸಂಘಟಕರು

ಸುಳ್ಯ ದಸರಾ ಶೋಭಾ ಯಾತ್ರೆಯಲ್ಲಿ ಕಿಕ್ಕಿರಿದು ತುಂಬಿದ ಜನಸಾಗರದ ನಡುವೆ ಈ ರಸ್ತೆಯಲ್ಲಿ ಬಂದ ಆಂಬುಲೆನ್ಸ್ ವಾಹನಗಳಿಗೆ ಕ್ಷಣಾರ್ಧದಲ್ಲಿ ದಾರಿ ಮಾಡಿಕೊಟ್ಟು ಮಾನವೀಯತೆ ಮೆರೆದರು.

ಶೋಭಾ ಯಾತ್ರೆ ಹಳಗೇಟು ತಲುಪುತ್ತಿದ್ದಂತೆ ಎರಡು ಅಂಬುಲೆನ್ಸ್ ವಾಹನಗಳು ಈ ಮಾರ್ಗವಾಗಿ ಸಾಗಿ ಬಂದಿತ್ತು. ರಸ್ತೆಉದ್ದಕ್ಕೂ ಟ್ಯಾಬ್ಲೂ ಗಳು,ಡಿ ಜೆ ವಾಹನಗಳು,ಜೊತೆಯಲ್ಲಿ ರಸ್ತೆಯಲ್ಲಿ ತುಂಬಿದ್ದ ಜನಸಾಗರದ ನಡುವೆ ಈ ರಸ್ತೆಯಲ್ಲಿ ಸಾಗು ಬರುತ್ತಿದ್ದ ಇತರ ವಾಹನಗಳ ನಡುವೆ ಸಂಘಟಕರು ಆಂಬುಲೆನ್ಸ್ ವಾಹನಗಳನ್ನು ಕ್ಷಣಮಾತ್ರವು ನಿಲ್ಲಿಸದೆ ನಿರಾಯಾಸವಾಗಿ ಸಾಗಲು ಅನುವು ಮಾಡಿಕೊಟ್ಟು ಮಾನವೀಯತೆ ಮೆರೆದ ದೃಶ್ಯ ಕಂಡುಬಂದಿತು.