ಪಂಜ: ಕಹಿಬೇವಿನ ಬೀಜದ ಹುಡಿ ತಯಾರಿ ಪ್ರಾತ್ಯಕ್ಷಿಕೆ

0

ಪರಿವಾರ ಪಂಜ ರೈತ ಉತ್ಪಾದಕ ಕಂಪನಿ ಆಶ್ರಯದಲ್ಲಿ ರೈತರಿಗೆ ಎಣ್ಣೆ ತೆಗೆಯದ ಕಹಿಬೇವಿನ ಬೀಜವನ್ನು ತಮ್ಮ ಕಣ್ಣೆದುರಿನಲ್ಲಿಯೇ ಹುಡಿ ಮಾಡಿ ಕೊಡುವ ಪ್ರಾತ್ಯಕ್ಷಿಕೆಗೆ ಚಾಲನೆಯನ್ನು ಪ್ರಗತಿಪರ ಕೃಷಿಕರಾದ ಡಾ!! ರಾಮಯ್ಯ ಭಟ್ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಇವರು ಸರಕಾರಗಳ ಆಶಯದಂತೆ ರೈತಪರವಾದ ಹೊಸ ಹೊಸ ಕೆಲಸ ಕಾರ್ಯಗಳು ಪರಿವಾರ ಪಂಜ ರೈತ ಉತ್ಪಾದಕ ಕಂಪನಿಯಿಂದ ಮೂಡಿಬರಲಿ ಎಂದರು.

ರೈತ ಉತ್ಪಾದಕ ಕಂಪನಿ ಅಧ್ಯಕ್ಷರಾದ ತೀರ್ಥಾನಂದ ಕೊಡೆಂಕಿರಿ ಪ್ರಾಸ್ತಾವಿಕವಾಗಿ ಮಾತನಾಡಿ ಬೇರು ಹುಳ ಅಲ್ಲದೇ ಮಣ್ಣಿನ ಮೂಲಕ ಬರುವ ಹಲವಾರು ರೋಗಕಾರಕ ಶೀಲಿಂದ್ರಗಳಿಗೆ ಔಷಧಿಯಾಗಿಯು, ಸಾವಯವ ಗೊಬ್ಬರವಾಗಿಯು ಬಹಳಷ್ಟು ಪರಿಣಾಮಕಾರಿಯಾದ ಕಹಿಬೇವಿನ ಹುಡಿಯನ್ನು ಕಲಬೆರಕೆ ರಹಿತವಾಗಿ ರೈತರ ಕಣ್ಣೆದುರಲ್ಲೆ ಮಾಡುವ ಸಲುವಾಗಿ ಈ ಯೋಜನೆ ಹಮ್ಮಿಕೊಂಡಿದ್ದು ಇನ್ನು ನಿರಂತರ ಈ ಕಹಿಬೇವಿನ ಬೀಜದ ಹುಡಿ ಪಂಜದಲ್ಲಿ ಲಭ್ಯವಿರಲಿದೆ. ಮಾತ್ರವಲ್ಲದೇ ದೊಡ್ಡ ಪ್ರಮಾಣದಲ್ಲಾದರೆ ರೈತರ ತೋಟದಲ್ಲೆ ಹುಡಿ ಮಾಡಿ ಕೊಡಲಾಗುವುದು ಎಂದರು.