ಸುಬ್ರಹ್ಮಣ್ಯ: ದೇವಸ್ಥಾನದ ವತಿಯಿಂದ ನೆಟ್ಟ ಗಿಡಗಳಿಗೆ ಹಾನಿ

0

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ವತಿಯಿಂದ ನೆಡಲಾದ ಗಿಡಗಳಿಗೆ. ಹಾನಿ ಮಾಡಲಾಗಿರುವ ಘಟನೆ ಸುಬ್ರಹ್ಮಣ್ಯ ದಿಂದ ವರದಿಯಾಗಿದೆ.

ಎರಡು ವರ್ಷಗಳ ಹಿಂದಿನಿಂದ
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿಯ ಮುತುವರ್ಜಿಯಿಂದ
ಗಿಡಗಳ ನಾಟಿಗೆ ಚಾಲನೆ ನೀಡಲಾಗಿದ್ದು ಹಲವಾರು ಗಿಡಗಳನ್ನು ನಡೆಲಾಗಿದೆ. ಕ್ಷೇತ್ರಕ್ಕೆ ಗಣ್ಯರು ಆಗಮಿಸಿದ ಸಂದರ್ಭದಲ್ಲಿ ಅವರಿಂದಲೇ ಗಿಡಗಳನ್ನು ನೆಡಿಸಲಾಗಿತ್ತು. ಅದರಂತೆ ಸುಬ್ರಹ್ಮಣ್ಯದ ನೂಚಿಲ ಎಂಬಲ್ಲಿ ನೆಡಲಾದ ಎರಡು ಗಿಡಗಳನ್ನು ಬುಡ ಸಮೇತ ಕಡಿದು ಹಾಕಿ, ಹಾನಿ ಮಾಡಿರುವ ಬಗ್ಗೆ ದೂರು ವ್ಯಕ್ತವಾಗಿದೆ. ಈ ಬಗ್ಗೆ ಸೂಕ್ತ ಕ್ರಮಕ್ಕಾಗಿ ಅರಣ್ಯ ಇಲಾಖೆ, ಪೊಲೀಸ್‌ ಠಾಣೆಗೆ ಮಾಹಿತಿ ನೀಡಲಾಗಿದೆ ಎಂದು ತಿಳಿದುಬಂದಿದೆ.