ಹರಿಹರಪಲ್ಲತ್ತಡ್ಕ ಕ್ಯಾಂಪ್ಕೋ ಶಾಖೆ ಡೆಪ್ಯುಟಿ ಮೆನೇಜರ್ ಸೋಮಪ್ರಕಾಶ್ ಪವಿತ್ರಮಜಲು ನಿವೃತ್ತಿ

0

ಸುಳ್ಯ ಕ್ಯಾಂಪ್ಕೋ ಸಂಸ್ಥೆಯಲ್ಲಿ ಸನ್ಮಾನ – ಬೀಳ್ಕೊಡುಗೆ

ಹರಿಹರಪಲ್ಲತ್ತಡ್ಕ ಕ್ಯಾಂಪ್ಕೋ ಶಾಖೆಯ ಡೆಪ್ಯುಟಿ ಮೆನೇಜರ್ ಸೋಮಪ್ರಕಾಶ್ ಪಿ.ಡಿ. ಪವಿತ್ರಮಜಲುರವರು ಅ.31 ರಂದು ಸೇವೆಯಿಂದ ನಿವೃತ್ತಿಗೊಂಡಿದ್ದು ಅವರಿಗೆ ಕ್ಯಾಂಪ್ಕೋ ಸಂಸ್ಥೆಯ ವತಿಯಿಂದ ಸನ್ಮಾನ ಹಾಗೂ ಬೀಳ್ಕೊಡುವ ಕಾರ್ಯಕ್ರಮವು ಸುಳ್ಯ ಕ್ಯಾಂಪ್ಕೋ ದಲ್ಲಿ ಅ.31 ರಂದು ನಡೆಯಿತು.


ಸೋಮಪ್ರಕಾಶ್ ಮತ್ತು ಶ್ರೀಮತಿ ಸುಜಾತ ದಂಪತಿಗಳನ್ನು ಶಾಲು ಹೊದಿಸಿ,ಫಲ ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಸೋಮಪ್ರಕಾಶ್ ರವರು ಮಾತನಾಡಿ ತನ್ನ 34 ವರ್ಷಗಳ ಕಾಲದ ಸುದೀರ್ಘ ಸೇವೆಯ ದಿನಗಳನ್ನು ಸ್ಮರಿಸಿಕೊಂಡು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.


ಕ್ಯಾಂಪ್ಕೋ ನಿರ್ದೇಶಕ ಕೃಷ್ಣಪ್ರಸಾದ್ ಮಡ್ತಿಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸುದೀರ್ಘ 34 ವರ್ಷಗಳ ಕಾಲ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ನಿಮ್ಮನ್ನು ಕ್ಯಾಂಪ್ಕೋ ಸಂಸ್ಥೆ ನೆನಪಿಸಿಕೊಳ್ಳುತ್ತದೆ ಎಂದು ಹೇಳಿ ನಿವೃತ್ತಿ ಜೀವನಕ್ಕೆ ಶುಭಹಾರೈಸಿದರು.
ವೇದಿಕೆಯಲ್ಲಿ ಪುತ್ತೂರು ಕ್ಯಾಂಪ್ಕೋ ಚೀಪ್ ಮೆನೇಜರ್ ಜಯರಾಮ ಶೆಟ್ಟಿ,ಕಾವು ಶಾಖೆಯ ಶಾಖಾಧಿಕಾರಿ ಸಂತೋಷ್, ಸುಳ್ಯ ಶಾಖೆಯ ಶಾಖಾಧಿಕಾರಿ ಕುಂಞಂಬು ಉಪಸ್ಥಿತರಿದ್ದು ಶುಭಹಾರೈಸಿ ಮಾತನಾಡಿದರು.
ಕ್ಯಾಂಪ್ಕೋ ಸಂಸ್ಥೆಯ ನಿವೃತ್ತ ಉದ್ಯೋಗಿ ಲೋಕೇಶ್ ರವರು ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಸೋಮಪ್ರಕಾಶ್ ರವರ ತಾಯಿ ಶ್ರೀಮತಿ ಇಂದಿರಾ,ಪುತ್ರಿ ಮುಕ್ತಾ,ಪುತ್ರ ತೇಜಸ್ ಹಾಗೂ ಕ್ಯಾಂಪ್ಕೋ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವಿನೋದ್ ಸ್ವಾಗತಿಸಿ,ತೇಜಸ್ ಸನ್ಮಾನ ಪತ್ರ ವಾಚಿಸಿದರು.
ಶಂಕರಪ್ರಸಾದ್ ಕಾರ್ಯಕ್ರಮ ನಿರೂಪಿಸಿ, ಕುಸುಮಾರವರು ಪ್ರಾರ್ಥಿಸಿ, ಗಾಯತ್ರಿ ವಂದಿಸಿದರು.