ಉಬರಡ್ಕ ಶ್ರೀ ನರಸಿಂಹ ಶಾಸ್ತಾವು ದೇವಾಲಯದಲ್ಲಿ ಸ್ವರ್ಣಪೂಜೆ

0

ಉಬರಡ್ಕ ಶ್ರೀ ನರಸಿಂಹ ಶಾಸ್ತಾವು ದೇವಾಲಯ ಮತ್ತು ಶ್ರೀ ವನಶಾಸ್ತಾವು ಕ್ಷೇತ್ರಗಳಲ್ಲಿ ಪುನಃ ಪ್ರತಿಷ್ಠೆ ಅಷ್ಟಬಂಧ ಕಾರ್ಯಕ್ರಮ ಜರುಗಿ 12 ವರ್ಷ ಕಳೆದುದರಿಂದ ಪುನಃ ಅಷ್ಟಬಂಧ ಬ್ರಹ್ಮಕಲಶ ಕಾರ್ಯ ಜರುಗುವ ಪೂರ್ವಭಾವಿಯಾಗಿ ಜ್ಯೋತಿಷ್ಯರಾದ ಬಾಲಕೃಷ್ಣ ಕಲ್ಲಾರೆ ಮತ್ತು ಸ್ವಾಮಿನಾಥನ್ ಜ್ಯೋತಿಷ್ಯ ಪುತ್ತೂರು ಇವರ ನೇತೃತ್ವದಲ್ಲಿ ಸ್ವರ್ಣ ಪೂಜೆಯು ನ.3 ರಂದು ನಡೆಯಿತು. ನ.8 ರಿಂದ ಅಷ್ಟಮಂಗಲ ಪ್ರಶ್ನೆ ಚಿಂತನೆಯು ನಡೆಯಲಿರುವುದು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನಾಕರ ಗೌಡ ಬಳ್ಳಡ್ಕ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುರೇಶ್ ಎಂ.ಎಚ್ ಹಾಗೂ ಸಮಿತಿಯ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.