ಬೆಳ್ಳಾರೆ: ಪರ್ತಿಕೆರೆ ಕುರುಂಬುಡೇಲು ರಸ್ತೆ ಕೆಸರುಮಯ, ದ್ವಿಚಕ್ರ ಸವಾರರ ಪರದಾಟ

0

ಬೆಳ್ಳಾರೆ ಜ್ಞಾನಗಂಗಾ ಶಾಲೆಯ ಸಮೀಪದಿಂದ ಚೂಂತಾರು ಮೂಲಕ ಶೇಣಿಗೆ ಸೇರುವ ರಸ್ತೆಯಲ್ಲಿ ಪರ್ತಿಕೆರೆ – ಕುರುಂಬುಡೇಲು ಎಂಬಲ್ಲಿ ಮಣ್ಣು ಮಳೆ ನೀರಿಗೆ ಕೊಚ್ಚಿಕೊಂಡು ಬಂದು ರಸ್ತೆಯ ಮೇಲೆ ಹರಡಿ ರಸ್ತೆ ಕೆಸರುಮಯವಾಗಿದೆ. ಒಂದೆರಡು ಮಂದಿ ಬೈಕ್ ಸವಾರರು ವಾಹನ ಸಮೇತ ಜಾರಿ ಕೆಸರಲ್ಲಿ ಬಿದ್ದು ಗಾಯಗೊಂಡಿರುವುದಾಗಿ ಸ್ಥಳೀಯರು ಹೇಳಿಕೊಂಡಿದ್ದಾರೆ. ರಸ್ತೆಯಲ್ಲಿ ನಡೆದು ಹೋಗುವ ಶಾಲಾ ಮಕ್ಕಳಿಗೂ ಕಷ್ಟಕರವಾಗಿದೆ.
ರಸ್ತೆಯ ಇಕ್ಕೆಲಗಳಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಈ ಸಮಸ್ಯೆ ಎದುರಾಗಿದ್ದು, ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಕಡೆ ಗಮನಹರಿಸುವಂತೆ ರಸ್ತೆ ಫಲಾನುಭವಿಗಳು ಆಗ್ರಹಿಸಿದ್ದಾರೆ.