ಗ್ರಾಮ ವಿಕಾಸ ಬಡ್ಡಿ ಹಣ ಪಂಚಾಯತ್ ಗೆ ನೀಡಲು ಪ್ರಿಯಾಂಕ ಖರ್ಗೆಯವರಿಗೆ ಮನವಿ

0

ಪೆರುವಾಜೆ ಗ್ರಾಮ ಪಂಚಾಯತಿಗೆ 2015 ರಲ್ಲಿ ಉಸ್ತುವಾರಿ ಸಚಿವರಾಗಿದ್ದ ರಮಾನಾಥ ರೈ ಅವರ ಮೂಲಕ ಗ್ರಾಮ ವಿಕಾಸ ಯೋಜನೆ ಬಂದಿದ್ದು ಈ ಅನುದಾನ ಬಳಕೆಯಾಗಿ ಈ ಹಣದ ಬಡ್ಡಿ ಯನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಕಾರ್ಯಗಳಿಗೆ ಬಳಸಲು ಪೆರುವಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಸಚಿನ್ ರಾಜ್ ಶೆಟ್ಟಿ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ ಖರ್ಗೆ ಅವರಿಗೆ ಮನವಿ ಸಲ್ಲಿಸಿದರು. ಇದರ ಬಗ್ಗೆ ಪರಿಶೀಲಿಸುವ ಭರವಸೆಯನ್ನು ಸಚಿವರು ನೀಡಿದ್ದಾರೆ ಎಂದು ಸಚಿನ್ ತಿಳಿಸಿದ್ದಾರೆ