ಕುಕ್ಕುಜಡ್ಕ: ವಿಷ್ಣುನಗರ ವಿಷ್ಣುಮೂರ್ತಿ ದೈವದ 70 ನೇ ವರ್ಷದ ಒತ್ತೆಕೋಲಕ್ಕೆ ಕೊಳ್ಳಿ ಮುಹೂರ್ತ

0

ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕ ವಿಷ್ಣುನಗರದ ಶ್ರೀ ಮಹಾವಿಷ್ಣುಮೂರ್ತಿ ರಕ್ತೇಶ್ವರೀ ಸಪರಿವಾರ ದೇವಸ್ಥಾನದಲ್ಲಿ ವಾರ್ಷಿಕವಾಗಿ ನಡರಯಲಿರುವ ಶ್ರೀ ದೈವದ 70 ನೇ ವರ್ಷದ ಒತ್ತೆಕೋಲಕ್ಕೆ ಮುಹೂರ್ತದ ಕೊಳ್ಳಿ ಕಡಿಯುವ ಕಾರ್ಯಕ್ರಮ ನ.16 ರಂದು ಬೆಳಗ್ಗೆ ನಡೆಯಿತು.
ವಿಷ್ಣುಮೂರ್ತಿ ದೈವದ ಪಾತ್ರಿ ರಾಮ ಮಣಿಯಾಣಿ ಆಲೆಟ್ಟಿ ಯವರ ನೇತೃತ್ವದಲ್ಲಿ ಹಾಗೂ ಸ್ಥಳೀಯ ಭಾರತೀಯ ತೀಯ ಸಮಾಜ ಬಾಂಧವರ ಸಹಕಾರದೊಂದಿಗೆ ಕೊಳ್ಳಿ ಕಡಿಯುವ ಕಾರ್ಯವು ನೆರವೇರಿತು.


ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರ ಎಂ.ಜಿ.ಸತ್ಯನಾರಾಯಣ ಭಟ್ ಹಾಗೂ ಮನೆಯವರು ಉಪಸ್ಥಿತರಿದ್ದರು.
ಸಂಕ್ರಮಣದ ಪ್ರಯುಕ್ತ ವಿಶೇಷವಾಗಿ ಸ್ಥಳೀಯ ಕುಕ್ಕುಜಡ್ಕದ ಮಹಾವಿಷ್ಣು ಭಜನಾ ಸಂಘ ಹಾಗೂ ಸಮರ್ಪಣಾ ಭಜನಾ ತಂಡದವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಸ್ಥಳೀಯ ಭಕ್ತಾದಿಗಳು ಭಾಗವಹಿಸಿದರು.