ಕಳಂಜ ವಿಷ್ಣುನಗರ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ

0


ಕಳಂಜ ವಿಷ್ಣುನಗರ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ನ.20 ಆಚರಿಸಲಾಯಿತು. ಪುಟಾಣಿ ರೀತಿಕ್ ಅಧ್ಯಕ್ಷತೆ ವಹಿಸಿದ್ದರು. ಹಾಗು ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಅಕ್ಷತಾ, ಗ್ರಾಮ ಪಂಚಾಯತ್ ಸದಸ್ಯರಾದ ಗಣೇಶ್ ರೈ, ಪಶು ವೈದ್ಯಧಿಕಾರಿ ಮೇಘ, ಕಿರಿಯ ಅರೋಗ್ಯ ಸಂರಕ್ಷಣಧಿಕಾರಿ ಬೇಬಿ, ಸಿ. ಹೆಚ್. ಒ. ಶಿಲ್ಪಾ, ಆಶಾಕಾರ್ಯಕರ್ತೆರಾದ ಶೇಸಮ್ಮ ಹಾಗು ಜಯಂತಿ, ಅನುಲತಾ, ಸುಂದರಿ, ಶ್ವೇತಾ, ಸುನಂದಾ ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೇಕ್ ಕಟ್ ಮಾಡುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮ ನಡೆಯಿತು. ನಂತರ ಎಲ್ಲಾ ಪುಟಾಣಿಗಳಿಗೆ ಬಹುಮಾನ ನೀಡಲಾಯಿತು. ಉಪಹಾರ ಹಾಗು ಸಿಹಿ ತಿನಿಸಿನ ವ್ಯವಸ್ಥೆಯು ಮಾಡಲಾಗಿತ್ತು. ಅಶ್ವಿನಿ ರಾಜೇಶ್ ಸ್ವಾಗತಿಸಿ, ಕಾರ್ಯಕರ್ತೆ ರಂಜಿತಾ ವಂದಿಸಿದರು. ಕಾರ್ಯಕ್ರದಲ್ಲಿ ಅಂಗನವಾಡಿ ಸಹಾಯಕಿ ಕಮಲ, ಪೋಷಕರು & ಮಕ್ಕಳು ಹಾಜರಿದ್ದು ಸಹಕರಿಸಿದರು.