ಸುಳ್ಯ ನೂತನ ಪತ್ರಿಕಾ ಭವನ ಪ್ರಾರಂಭಗೊಂಡು ಒಂದು ವರ್ಷ ಹಿನ್ನೆಲೆ ಗಣಪತಿ ಹವನ

0

ಸುಳ್ಯ ಪ್ರೈಸ್ ಕ್ಲಬ್ ಕಟ್ಟಡ ಸಹಾಯಾರ್ಥ ನಿಧಿ ಸಂಗ್ರಹ ಕೂಪನ್ ಬಿಡುಗಡೆ

ಸುಳ್ಯದಲ್ಲಿ ಕಳೆದ ವರ್ಷ ನೂತನವಾಗಿ ನಿರ್ಮಾಣಗೊಂಡ ಪತ್ರಿಕಾಭವನ ಉದ್ಘಾಟನೆಗೊಂಡು ನ.30ಕ್ಕೆ ಒಂದು ವರ್ಷ ಪೂರ್ತಿಗೊಂಡ ಹಿನ್ನೆಲೆಯಲ್ಲಿ ಬೆಳಿಗ್ಗೆ ಬ್ರಹ್ಮಶ್ರೀ ವೇ. ಮೂ. ಪುರೋಹಿತ ನಾಗರಾಜ ಭಟ್ ಅವರ ನೇತೃತ್ವದಲ್ಲಿ ಗಣಪತಿ ಹವನ ಹಾಗೂ ಪ್ರೆಸ್ ಕ್ಲಬ್ ಸಹಾಯಾರ್ಥ ನಿಧಿ ಸಂಗ್ರಹ ಅಭಿಯಾನದ ಕೂಪನನ್ನು ಬಿಡುಗಡೆಗೊಳಿಸಲಾಯಿತು.

ತಹಶಿಲ್ದಾರ್ ಮಂಜುನಾಥ ಹಾಗೂ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಅವರು ನಿಧಿಸಂಗ್ರಹ ಕೂಪನನ್ನು ಬಿಡುಗಡೆಗೊಳಿಸಿ, ಶುಭಹಾರೈಸಿದರು.
ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪತ್ರಿಕಾ ಭವನ ಕಟ್ಟಡದ ನಿರ್ಮಾಣದ ಕುರಿತು ವಿವರಿಸಿದರು.


ಈ ಸಂದರ್ಭದಲ್ಲಿ ನಿವೃತ್ತ ಕೃಷಿ ಅಧಿಕಾರಿ ಮೋಹನ ನಂಗಾರು, ಪ್ರೆಸ್ ಕ್ಲಬ್ ಕಾರ್ಯದರ್ಶಿ ಜಯಪ್ರಕಾಶ್ ಕುಕ್ಕೇಟಿ, ಕೋಶಾಧಿಕಾರಿ ರಮೇಶ್ ನೀರಬಿದಿರೆ, ಉಪಾಧ್ಯಕ್ಷ ಜೆ‌.ಕೆ. ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರೆಸ್ ಕ್ಲಬ್ ನಿರ್ದೇಶಕರುಗಳು ಹಾಗೂ ಸದಸ್ಯರುಗಳು ಈ ವೇಳೆ ಉಪಸ್ಥಿತರಿದ್ದರು. ಪ್ರೆಸ್ ಕ್ಲಬ್ ಕಾರ್ಯದರ್ಶಿ ಜಯಪ್ರಕಾಶ್ ಕುಕ್ಕೇಟಿ ಸ್ವಾಗತಿಸಿದರು.