ವಿಪ್ರ ಸಮಾವೇಶದಲ್ಲಿ ಸಂಗೀತ ರಸಧಾರೆ ಹರಿಸಿದ ವಾದ್ಯ ಸಂಗೀತ ಗೋಷ್ಠಿ

0

ಬ್ರಾಹ್ಮಣ ಬಳಗದವರಿಂದ ಕೊಳಲು ವಾದನ ಹಾಗೂ ಸಂಗೀತ ಕಾರ್ಯಕ್ರಮ

ಸುಳ್ಯ ತಾಲೂಕು ಬ್ರಾಹ್ಮಣ ಸಂಘದ ವಿಪ್ರ ಸಮಾವೇಶ ದಲ್ಲಿ ನಡೆದ ವಾದ್ಯ ಸಂಗೀತ ಗೋಷ್ಠಿಯು ಜನಮನಸೂರೆಗೊಂಡಿತು.


ಮಧ್ಯಾಹ್ನ ಖ್ಯಾತ ಕೊಳಲು‌ ವಾದಕ ಗಣೇಶ್ ಬೆಂಗಳೂರು ರವರಿಂದ ಕೊಳಲು ವಾದನ ನಡೆಯಿತು. ಬಳಿಕ ಬ್ರಾಹ್ಮಣ ಬಳಗದ ಮಹಿಳೆಯರಿಂದ ಸಂಗೀತ ಕಾರ್ಯಕ್ರಮ ಮೂಡಿ ಬಂತು. ಪಕ್ಕ ವಾದ್ಯದಲ್ಲಿ ಕೀಬೋರ್ಡ್ ನಲ್ಲಿ ದಿನೇಶ್ ಮೇನಾಲ, ರಿದಂ ಪ್ಯಾಡ್ ನಲ್ಲಿ ಸಾಯಿನಾರಾಯಣ ಕಲ್ಮಡ್ಕ,
ಶ್ಯಾಂ ಭಟ್ ಅರಂಬೂರು ಮೃದಂಗದಲ್ಲಿ ಸಹಕರಿಸಿದರು.