ಕಾಯರ್ತೋಡಿ: ಸೂರ್ತಿಲ ಶ್ರೀ ರಕ್ತೇಶ್ವರಿ ಕ್ಷೇತ್ರದಲ್ಲಿ ಸಂಕ್ರಮಣ ಪೂಜೆ

0

ಸುಳ್ಯದ ಕಾಯರ್ತೋಡಿ ಸೂರ್ತಿಲ ಶ್ರೀ ರಕ್ತೇಶ್ವರಿ ಕ್ಷೇತ್ರದಲ್ಲಿ ಧನು ಸಂಕ್ರಮಣದ ಪ್ರಯುಕ್ತ ಸಂಕ್ರಮಣ ಪೂಜಾ ಕಾರ್ಯಕ್ರಮವು ಡಿ.16ರಂದು ನಡೆಯಿತು.
ಈ ಸಂಧರ್ಭದಲ್ಲಿ ಕ್ಷೇತ್ರದಲ್ಲಿ ಹರಕೆ ಒಪ್ಪಿಸಿದವರಿಗೆ ಪ್ರಸಾದ ವಿತರಣೆ ಮಾಡಲಾಯಿತು. ಶ್ರೀ ಕ್ಷೇತ್ರಕ್ಕೆ ಗಜಕೇಸರಿ ನಡುಬೈಲು ತಂಡದ ಸಾಗರ್ ರೈ ನೇತೃತ್ವದಲ್ಲಿ ಬೆಳಕಿನ ವ್ಯವಸ್ಥೆ ಮಾಡಿದವರನ್ನು ಕ್ಷೇತ್ರದಲ್ಲಿ ಗುರುತಿಸಲಾಯಿತು.

ಕ್ಷೇತ್ರಕ್ಕೆ ಬಂದ ಭಕ್ತಭಿಮಾನಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ, ಸೇವಾ ಸಮಿತಿ ಹಾಗೂ ಮಹಿಳಾ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು.