ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕ್ಲರ್ಕ್ ಆಗಿದ್ದ ದಿವಾಕರ ಶೆಟ್ಟಿಹಿತ್ಲು ಮೂರ್ಜೆ ಸೇವಾ ನಿವೃತ್ತಿ

0

ಸುಳ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕ್ಲರ್ಕ್ ಆಗಿದ್ದ ದಿವಾಕರ ಶೆಟ್ಟಿಹಿತ್ಲು ಮೂರ್ಜೆಯವರು ಇಂದು ಸೇವಾನಿವೃತ್ತಿ ಹೊಂದಿದ್ದಾರೆ.
1983 ರಿಂದ 2001 ರ ವರೆಗೆ ಭೂಸೇನೆಯಲ್ಲಿ ಹವಾಲ್ದಾರ್ ಆಗಿ ಸೇವೆ ಸಲ್ಲಿಸಿದ್ದ ದಿವಾಕರ್ ರವರು 2009 ರಲ್ಲಿ ಗಾರ್ಡ್ ಆಗಿ ಸ್ಟೇಟ್ ಬ್ಯಾಂಕ್ ಪಣಂಬೂರು ಶಾಖೆಗೆ ಸೇರಿದ್ದರು. ಬಳಿಕ ಸುಳ್ಯ ಎಸ್.ಬಿ.ಐ. ಶಾಖೆಗೆ ವರ್ಗಾವಣೆಗೊಂಡು‌, ಅಲ್ಲಿ ಕ್ಲರಿಕಲ್ ಎಕ್ಸಾಂ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 2017 ರಲ್ಲಿ ಮೂಡಿಗೆರೆ ಶಾಖೆಗೆ ವರ್ಗಾವಣೆಗೊಂಡರು. 2021 ರಲ್ಲಿ ಮುಂಭಡ್ತಿಗೊಂಡು ಸುಳ್ಯ ಶಾಖೆಗೆ ವರ್ಗಾವಣೆಯಾಗಿ ಬಂದರು.

ಇದೀಗ ಅವರಿಗೆ ವಯೋನಿವೃತ್ತಿಯಾಗಿದ್ದು, ಡಿ.೩೦ರಂದು ಸಂಜೆ ಸುಳ್ಯ ಶಾಖೆಯಲ್ಲಿ ವಿದಾಯ ಸಮಾರಂಭ ನಡೆಯಿತು. ಬ್ಯಾಂಕ್ ಮೇನೇಜರ್ ಉತ್ಸವ್ ಚಕ್ರವರ್ತಿ ಅಧ್ಯಕ್ಷತೆ ವಹಿಸಿದ್ದರು. ಶ್ರೀಮತಿ ಶೈಲಾ ದಿವಾಕರ್, ಪುತ್ರಿ ದಿಶಾ ಸಜನ್ ಬೈಲಾಡಿ, ಅಳಿಯ ಸಜನ್ ಬೈಲಾಡಿ, ಪುತ್ರ ದರ್ಶನ್ ದಿವಾಕರ್, ಬ್ಯಾಂಕ್ ಸಿಬ್ಬಂದಿಗಳು ಉಪಸ್ಥಿತರಿದ್ದರು.