ಜ.7: ಯುವಜನ ಸಂಯುಕ್ತ ಮಂಡಳಿಯಿಂದ ‘ಯುವ ಕ್ಷಮತಾ’-ಯುವಕ, ಯುವತಿಯರಿಗೆ ತರಬೇತಿ ಕಾರ್ಯಕ್ರಮ

0

ಸುಳ್ಯದ ಯುವಜನ ಸಂಯುಕ್ತ ಮಂಡಳಿ ಇದರ ಆಶ್ರಯದಲ್ಲಿ ಯುವ ಕ್ಷಮತಾ-2024 ಯುವಕ ಯುವತಿಯರಿಗೆ ತರಬೇತಿ ಕಾರ್ಯಕ್ರಮ ಜ.7ರಂದು‌ ಸುಳ್ಯದ ಯುವಜನ ಸಂಯುಕ್ತ ಮಂಡಳಿ ಸಭಾಂಗಣದಲ್ಲಿ ನಡೆಯಲಿದೆ.

ಕಾರ್ಯಕ್ರಮ ಆಯೋಜನೆ, ಸಂಯೋಜನೆ ಮತ್ತು ಭಾಷಣಕಲೆ ತರಬೇತಿ ಕುರಿತು ‌ಬೆಳಗ್ಗೆ 10 ರಿಂದ ತರಬೇತಿ. ಜೆಸಿಐ ತರಬೇತುದಾರ ಪ್ರದೀಪ್ ಬಾಕಿಲ ಸಂಪನ್ಮೂಲ ವ್ಯಕ್ತಿಯಾಗಿರುತ್ತಾರೆ. ಬಳಿಕ ಕ್ಯಾನ್ಸರ್ ರೋಗದ ಮಾಹಿತಿ, ಕ್ಯಾನ್ಸರ್ ರೋಗಕ್ಕೆ ಕಾರಣಗಳು ಮುಂಜಾಗ್ರತಾ ಕ್ರಮಗಳ ಕುರಿತು ಡಾ. ಕಮಲಾಕ್ಷ ಕೆ ಶೆಣೈ ಮಾಹಿತಿ ನೀಡುವರು.