ಶಾಸ್ತಾವು ಯುವಕ ಮಂಡಲದ ವತಿಯಿಂದ ರೆಂಜಾಳ ದೇವಳ ವಠಾರದಲ್ಲಿ ಹಣ್ಣಿನ ಗಿಡ ನೆಡುವ ಕಾರ್ಯಕ್ರಮ

0

ಮರ್ಕಂಜದ ಶ್ರೀ ಶಾಸ್ತಾವು ಯುವಕ ಮಂಡಲ ರೆಂಜಾಳ ಇದರ ವತಿಯಿಂದ ವಿವಿಧ ಹಣ್ಣಿನ ಗಿಡಗಳನ್ನು ಶ್ರೀ ಶಾಸ್ತವು ಸದಾಶಿವ ಮಹಾಗಪತಿ ದೇವಸ್ಥಾನ ರೆಂಜಾಳದ ವಠಾರದಲ್ಲಿ ನೆಡಲಾಯಿತು. ಹಣ್ಣಿನ ಗಿಡಗಳನ್ನು ಕಡಬದ ವನಸಿರಿ ಫಾರ್ಮ್ಸ್‌ನ ಮಾಲಕರಾದ ದಯಾಪ್ರಸಾದ್ ಚೀಮುಳ್ಳುರವರು ಉಚಿತವಗಿ ನೀಡಿ ಸಹಕರಿಸಿದರು. ಈ ಶ್ರಮದಾನ ಕಾರ್ಯದಲ್ಲಿ ಯುವಕ ಮಂಡಲದ ಸದಸ್ಯರುಗಳು ಭಾಗವಹಿಸಿದರು.