ಗಾಂಧಿನಗರದಲ್ಲಿರುವ ಮಿತ್ತೂರು ನಾಯರ್ ಭಂಡಾರ ತಂಗುವ ಕಟ್ಟೆಯ ಆವರಣದ ಬದಿಗೆ ನ.ಪಂ.ನಿಂದ ಇಂಟರ್‌ಲಾಕ್ ಅಳವಡಿಕೆ

0

ಸುಳ್ಯದ ಗಾಂಧಿನಗರದಲ್ಲಿರುವ ಕಲ್ಕುಡ ದೈವಸ್ಥಾನದ ಎದುರು ಭಾಗದಲ್ಲಿ ಮಿತ್ತೂರು ನಾಯರ್ ದೈವದ ಭಂಡಾರ ಬಂದು ನಿಲ್ಲುವ ಕಟ್ಟೆಯ ಆವರಣದ ಹೊರಗಡೆ ರಸ್ತೆ ಬದಿಗೆ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿಯವರು ಇಂಟರ್‌ಲಾಕ್ ಹಾಕಿಸಿದ್ದಾರೆ. ನ.ಪಂ. ಆಡಳಿತಾಧಿಕಾರಿ ತಹಶೀಲ್ದಾರ್ ಜಿ.ಮಂಜುನಾಥ್ ಹಾಗೂ ಮುಖ್ಯಾಧಿಕಾರಿ ಸುಧಾಕರ ಎಂ.ಎಚ್.ರವರೊಡನೆ ವಿನಂತಿಸಿಕೊಂಡು ಅನುದಾನ ಮಂಜೂರು ಮಾಡಿಸಿಕೊಂಡು ಇಂಟರ್‌ಲಾಕ್ ಕಾಮಗಾರಿ ನಡೆಸಿರುವುದಾಗಿ ಕಂಠಿ ತಿಳಿಸಿದ್ದಾರೆ.

ಸುಳ್ಯ ಚೆನ್ನಕೇಶವ ದೇವರ ಜಾತ್ರೋತ್ಸವ ಪ್ರಯುಕ್ತ ಇಂದು ಉಬರಡ್ಕ ಮಿತ್ತೂರಿನಿಂದ ಮಿತ್ತೂರು ನಾಯರ್ ದೈವಗಳ ಭಂಡಾರ ಬರಲಿದ್ದು, ಈ ಕಟ್ಟೆಯಲ್ಲಿ ತಂಗಲಿದೆ.